Advertisement

ಲೂಟಿ ರವಿ ಎಂಬ ಸಿದ್ದರಾಮಯ್ಯರ ಹೇಳಿಕೆಗೆ ಸಿ.ಟಿ.ರವಿ ಆಕ್ರೋಶ

10:02 PM Sep 11, 2022 | Team Udayavani |

ಚಿಕ್ಕಮಗಳೂರು : ” ಜನ ಸಿದ್ದರಾಮಯ್ಯನವರನ್ನ ಕಚ್ಚೆ ಹರಕು ಎನ್ನುತ್ತಾರೆ!, ಈ ಮಾತು ನನ್ನದ್ದಲ್ಲ ಮೈಸೂರಿನ ಜನರದ್ದು, ಹೀಗೆಂದು ಹೇಳಬಹುದಲ್ವಾ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಭಾನುವಾರ ಕಿಡಿ ಕಾರಿದ್ದಾರೆ.

Advertisement

ಕವಿಕಲ್‍ಗಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ”ಸಿ.ಟಿ.ರವಿ ಲೂಟಿ ರವಿ” ಎಂಬ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ಹೊರ ಹಾಕಿದರು. ”ನಾನು ಆ ರೀತಿ ಹೇಳಿದರೆ ಮರ್ಯಾದೆ ಹೋಗುವುದು ಅವರದ್ದು. ಎಂಎಲ್ಎ ಇದ್ದಾಗ, ಇಲ್ಲದಾಗ ಹೇಗಿದ್ದರು ಅಂತ ಬಿಚ್ಚಿಡಲು ನನಗೂ ಬರುತ್ತದೆ. ನನ್ನದ್ದಲ್ಲ ಜನ ಮಾತನಾಡುತ್ತಾರೆ ಅಂದರೆ ಅವರ ಬಾಯಲ್ಲಿ ಬಂದಾಗ ಅವರ ಮಾತಾಗುತ್ತದೆ” ಎಂದರು.

”ಸಿ.ಟಿ.ರವಿ ಅಲ್ಲ ಲೂಟಿ ರವಿ ಅಂತ ಅವರು ಹೇಳಿದ್ದಾರೆ, ಅದಕ್ಕೆ ದಾಖಲೆ ಬೇಕು. ಜನ ನನ್ನನ್ನ 4 ಬಾರಿ ಪ್ರೀತಿಯಿಂದ ಹೆಚ್ಚಿನ ಲೀಡ್‍ನಲ್ಲಿ ಗೆಲ್ಲಿಸಿದ್ದಾರೆ. ಜವಾಬ್ದಾರಿಯಲ್ಲಿ ಇರುವ ವ್ಯಕ್ತಿ ಜವಾಬ್ದಾರಿಯಿಂದ ಮಾತನಾಡಬೇಕು. ಯಾರನ್ನಾದರೂ ಕೇಳಿ, ಯಾರ ಮನೆ ಲೂಟಿ ಮಾಡಿದ್ದೇನೆ, ಹಣ ಪಡೆದು ಟ್ರಾನ್ಸ್‌ಫರ್ ಮಾಡಿದ್ದೇನಾ? ಅವರ ಎಲ್ಲಾ ಹೇಳಿಕೆಗೆ ಕೌಂಟರ್ ಕೊಡಬೇಕು ಅನ್ನೋದು ನನ್ನ ಉದ್ದೇಶವಲ್ಲ” ಎಂದು ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next