Advertisement

ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ? ಎಸ್‌ಡಿಪಿಐಗೆ ತಿರುಗೇಟು ನೀಡಿದ ಸಿ.ಟಿ.ರವಿ 

08:55 PM Aug 14, 2022 | Team Udayavani |

ಚಿಕ್ಕಮಗಳೂರು: ಸಾವರ್ಕರ್‌ ಬಗ್ಗೆ ಶಿವಮೊಗ್ಗದಲ್ಲಿ ಎಸ್‌ಡಿಪಿಐ ಮುಖಂಡರು ಆಡಿರುವ ಮಾತುಗಳಿಗೆ ಕ್ಷಮೆ ಇಲ್ಲ. ಅವರು ದೇಶದಲ್ಲಿರಲು ಅರ್ಹರಲ್ಲ. ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ ಎಂದು ಶಾಸಕ ಸಿ.ಟಿ.ರವಿ ತಿರುಗೇಟು ನೀಡಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಸಾವರ್ಕರ್‌ ಅವರ ದೇಶಪ್ರೇಮ, ಕಾಳಜಿ, ಪ್ರಾಮಾಣಿಕತೆ ಎಸ್‌ಡಿಪಿಐನಂತಹ ಸಂಘಟನೆಯವರಿಗೆ ಗೊತ್ತಿರಲು ಸಾಧ್ಯವಿಲ್ಲ. ದೇಶದ ವಿಭಜನೆ ಮಾನಸಿಕತೆ ಹೊಂದಿರುವ ಎಸ್‌ಡಿಪಿಐ ಅವರಿಗೆ ಸಾವರ್ಕರ್‌ ಅರ್ಥವಾಗಲೂ ಸಾಧ್ಯವಿಲ್ಲ. ಸಾವರ್ಕರ್‌ ಯಾರು, ಏನೆಂಬುದನ್ನು ಅವರು ಬದುಕಿದ್ದಾಗಲೇ ತೋರಿಸಿದ್ದಾರೆ.

ಸಾವರ್ಕರ್‌ ನಿಧನರಾದ ಸಂದರ್ಭದಲ್ಲಿ ದೇಶದ ಅಂದಿನ ಪ್ರಧಾನಿ, ರಾಷ್ಟ್ರಪತಿಗಳು, ವಿವಿಧ ಪಕ್ಷಗಳ ಮುಖಂಡರು ಆಡಿರುವ ಮಾತುಗಳೇ ಅವರು ಏನೆಂಬುದನ್ನು ದೃಢಪಡಿಸುತ್ತದೆ. ವೀರ ಸಾವರ್ಕರ್‌ ಅವರು ಬ್ರಿಟಿಷರ ಎರಡು ಕರಿ ನೀರಿನ ಶಿಕ್ಷೆಗೆ ಒಳಗಾದವರು. ಇಂತಹ ದೇಶಭಕ್ತನ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವವರು ಈ ದೇಶದಲ್ಲಿರಲು ಅರ್ಹರಲ್ಲ. ಅವರ ಮನಸ್ಥಿತಿಯನ್ನು ಮಟ್ಟ ಹಾಕಲು ಸರ್ಕಾರ ಚಿಂತನೆ ನಡೆಸಬೇಕು ಎಂದರು.

 

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next