Advertisement

ಸೆ. 17ರಿಂದ ಸಿಆರ್‌ಝಡ್‌ ಮರಳುಗಾರಿಕೆ ಸ್ಥಗಿತ

10:35 PM Sep 12, 2021 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಿಆರ್‌ಝಡ್‌ ವಲಯದಲ್ಲಿ ಮರಳು ದಿಬ್ಬ ತೆರವಿಗೆ ಪರಿಸರ ಇಲಾಖೆ ನೀಡಿರುವ ಪರಿಸರ ವಿಮೋಚನ ಪತ್ರ (ಇಸಿ ಕ್ಲಿಯರೆನ್ಸ್‌) ದ ಅವಧಿ ಸೆ. 16ಕ್ಕೆ ಮುಗಿಯಲಿದ್ದು ಸೆ. 17ರಿಂದ ಮರಳುಗಾರಿಕೆ ಸ್ಥಗಿತಗೊಳ್ಳಲಿದೆ.

Advertisement

ಮತ್ತೆ ಮರಳುಗಾರಿಕೆಗೆ ಹೊಸದಾಗಿ ಪ್ರಕ್ರಿಯೆಗಳು ನಡೆಯ  ಬೇಕಿವೆ. ನಾನ್‌ಸಿಆರ್‌ಝಡ್‌ನ‌ 16 ಬ್ಲಾಕ್‌ಗಳಲ್ಲಿ ಮರಳುಗಾರಿಕೆ ಮುಂದುವರಿಯಲಿದೆ. ಜಿಲ್ಲೆಯ ಸಿಆರ್‌ಝಡ್‌ನ‌ಲ್ಲಿ ನವೆಂಬರ್‌ನಿಂದ ಈ ವರೆಗೆ 2,35,414 ಮೆಟ್ರಿಕ್‌ ಟನ್‌ ಮರಳು ತೆರವುಗೊಳಿಸಲಾಗಿದೆ.

ಸಿಆರ್‌ಝಡ್‌ನ‌ಲ್ಲಿ 2019ರ ಡಿ. 26ಕ್ಕೆ ಕೊನೆಗೊಂಡಿದ್ದ ಮರಳುಗಾರಿಕೆ ಕರ್ನಾಟಕ ಕರಾವಳಿ ವಲಯ ನಿರ್ವ ಹಣೆ ಸಮಿತಿ (ಕೆಸಿಝಡ್‌ಎಂ)ಯ ಅನುಮೋದನೆ ಪ್ರಕ್ರಿಯೆಗಳು ನಡೆದು 2020ರ ನವೆಂಬರ್‌ನಲ್ಲಿ ಆರಂಭಗೊಂಡಿತ್ತು. ನೇತ್ರಾವತಿ 8, ಗುರುಪುರ 4 ಹಾಗೂ ಶಾಂಭವಿ ನದಿಯಲ್ಲಿ 1ಬ್ಲಾಕ್‌ ಸಹಿತ 13 ಬ್ಲಾಕ್‌ (ದಿಬ್ಬ)ಗಳಲ್ಲಿ  ಮರಳು ತೆರವಿಗೆ ಎರಡು ಹಂತಗಳಲ್ಲಿ 105 ಮಂದಿ ಗುತ್ತಿಗೆದಾರರಿಗೆ ಪರವಾನಿಗೆ ನೀಡಲಾಗಿತ್ತು.

ಜೂ. 1ರಿಂದ ಎರಡು ತಿಂಗಳ ಕಾಲ ಜಾರಿಯಲ್ಲಿದ್ದ ಮರಳುಗಾರಿಕೆ ನಿಷೇಧ ಜು. 31ಕ್ಕೆ ಕೊನೆಗೊಂಡು ಆಗಸ್ಟ್‌ ಮಧ್ಯಭಾಗದಲ್ಲಿ ನಿಯಮ ಗಳನ್ನು ಉಲ್ಲಂಘಿಸಿರುವ ಪ್ರಕರಣ ಗಳಲ್ಲಿ ಒಳಗೊಂಡಿರುವ ಪರವಾನಿಗೆ ಗಳಿಗೆ ಹೊರತಾಗಿ ಉಳಿದ ಪರ ವಾ ನಿಗೆ ದಾರರು ಸೆ. 16ರ ವರೆಗೆ ಮರಳು ಗಾರಿಕೆ ನಡೆಸಬಹುದಾಗಿದೆ.

ಸದ್ಯ ಸಮಸ್ಯೆ ಬಾರದು :

Advertisement

ನಾನ್‌ಸಿಆರ್‌ಝಡ್‌ನ‌ಲ್ಲಿ ಗುರುತಿಸಲಾದ 58 ಬ್ಲಾಕ್‌ಗಳಿವೆ. 16 ಬ್ಲಾಕ್‌ ಗಳು ಕಾರ್ಯಾಚರಿಸುತ್ತಿವೆ. 9 ಬ್ಲಾಕ್‌ಗಳನ್ನು ಸರಕಾರಿ ಕಾಮಗಾರಿಗಳಿಗೆ ಮೀಸಲಿಡಲಾಗಿದೆ. ಸಿಆರ್‌ಝಡ್‌ನ‌ಲ್ಲಿ ಮರಳುಗಾರಿಕೆ ಆರಂಭ

ವಾಗುವವರೆಗೆ ಇಲ್ಲಿಂದ ಪೂರೈಕೆ ಆಗಲಿದೆ. ನಿಯಮಗಳ ಪ್ರಕಾರ ಮರಳು ಸಂಗ್ರಹಿಸಿ ಇಡಲು ಅವ ಕಾಶ ವಿಲ್ಲ. ನಿರ್ಮಾಣಗಾರರು ಪರವಾ ನಿಗೆ ಮೂಲಕ ಪಡೆದಿರುವ ಮರಳನ್ನು ಯಾರ್ಡ್‌ನಲ್ಲಿ ಸಂಗ್ರಹಿಸಿ ಡಲು ಅವಕಾಶವಿದೆ. ಸಿಆರ್‌ಝಡ್‌ ನಲ್ಲಿ ಮರಳುಗಾರಿಕೆ ಅನು ಮತಿ ಪ್ರಕ್ರಿಯೆ ವಿಳಂಬವಾದರೆ ಮರಳು ಸಮಸ್ಯೆ ತಲೆದೋರುವ ಸಾಧ್ಯತೆಗಳಿವೆ.

ಹೊಸದಾಗಿ ಪ್ರಕ್ರಿಯೆ ಬಳಿಕ ಆರಂಭ:

ನೇತ್ರಾವತಿ, ಫಲ್ಗುಣಿ ಹಾಗೂ ಶಾಂಭವಿ ನದಿಯ ಸಿಆರ್‌ಝಡ್‌ನ‌ಲ್ಲಿ ಮತ್ತೆ ಬ್ಯಾಥಮೆಟ್ರಿಕ್ಸ್‌ ಸರ್ವೇ ನಡೆದು ಮರಳು ದಿಬ್ಬಗಳನ್ನು ಗುರು ತಿಸಿ ತಾಂತ್ರಿಕ ವರದಿ ಪಡೆಯ ಲಾಗು ತ್ತದೆ. ಜಿಲ್ಲಾಧಿಕಾರಿ ಅಧ್ಯಕ್ಷತೆ ¿ ುಲ್ಲಿರುವ ಜಿಲ್ಲಾ ಮರಳು ಉಸ್ತು ವಾರಿ ಸಮಿತಿಯು ವರದಿ ಯನ್ನು ಪರಿಶೀಲಿಸಿ ಕೆಸಿಝಡ್‌ಎಂಗೆ ಕಳುಹಿಸುತ್ತದೆ. ಅದು ಪರಿ ಶೀಲಿಸಿ ಅನುಮೋದಿಸಿದ ಬಳಿಕ ಮರಳುಗಾರಿಕೆ ಆರಂಭವಾಗುತ್ತದೆ. ಆದರೆ ಈ ಬಾರಿ ಕಳೆದ ವರ್ಷ ನೀಡಿರುವ ಪರಿಸರ ವಿಮೋಚನ ಪತ್ರವನ್ನೇ ಮುಂದುವರಿಸಿ ಮರಳುಗಾರಿಕೆಗೆ ಅವ‌ಕಾಶ ನೀಡುವ ಸಾಧ್ಯತೆಗಳ ಬಗ್ಗೆಯೂ ಚಿಂತನೆ ನಡೆಯುತ್ತಿದೆ.

ಸದ್ಯದಲ್ಲೇ ನಿರ್ಧಾರ :

ಸಿಆರ್‌ಝಡ್‌ ವಲಯದಲ್ಲಿ ಮರಳು ದಿಬ್ಬ ತೆರವುಗೊಳಿಸಲು ಕೆಸಿಝಡ್‌ಎಂ ನೀಡಿರುವ ಪರಿಸರ ವಿಮೋಚನ ಪತ್ರ ಸೆ. 16ಕ್ಕೆ ಮುಗಿಯಲಿದೆ. ಮುಂದಿನ ಕ್ರಮಗಳ ಬಗ್ಗೆ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆ ನಡೆಸಿನಿರ್ಧಾರಗಳನ್ನು ಕೈಗೊಳ್ಳಲಿದೆ.-ಡಾ| ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿ, ಮರಳು ಉಸ್ತುವಾರಿ ಸಮಿತಿ ಅಧ್ಯಕ್ಷರು

ಸಿಆರ್‌ಝಡ್‌ ಮರಳುಗಾರಿಕೆ ಮುಕ್ತಾಯ ಹಿನ್ನೆಲೆಯಲ್ಲಿ  ಸೆ. 13ರ ಬಳಿಕ ಬೆಂಗಳೂರಿನಲ್ಲಿ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವರನ್ನು ಭೇಟಿಯಾಗಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸುತ್ತೇನೆ. ಸಿಆರ್‌ಝಡ್‌ನ‌ಲ್ಲಿ  ಮರಳುಗಾರಿಕೆಗೆ ಸಂಬಂಧಪಟ್ಟು  ತ್ವರಿತ ಕ್ರಮ ಕೈಗೊಳ್ಳುವಂತೆ ಸಚಿವರನ್ನು ಕೋರಲಾಗುವುದು. - ಎಸ್‌. ಅಂಗಾರ, ಬಂದರು, ಮೀನುಗಾರಿಕಾ ಖಾತೆ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next