Advertisement

ಛತ್ತೀಸ್ ಗಢ್: ನಕ್ಸಲೀಯರ ದಾಳಿಯಲ್ಲಿ ಸಿಆರ್ ಪಿಎಫ್ ಯೋಧ ಹುತಾತ್ಮ

09:53 AM Nov 08, 2019 | Nagendra Trasi |

ಛತ್ತೀಸ್ ಗಢ್: ನಕ್ಸಲ್ ಪಡೆ ನಡೆಸಿದ ದಾಳಿಯಲ್ಲಿ ಕೇಂದ್ರ ಮೀಸಲು ಪಡೆಯ(ಸಿಆರ್ ಪಿಎಫ್) ಯೋಧರೊಬ್ಬರು ಹುತಾತ್ಮರಾಗಿರುವ ಘಟನೆ ಗುರುವಾರ ನಸುಕಿನ ವೇಳೆ ಛತ್ತೀಸ್ ಗಢದ ಬಿಜಾಪುರ್ ಜಿಲ್ಲೆಯಲ್ಲಿ ನಡೆದಿದೆ.

Advertisement

ಇಂದು ಬೆಳಗಿನ ಜಾವ 4ಗಂಟೆಗೆ ಬಿಜಾಪುರ್ ಜಿಲ್ಲೆಯ ಟೋನ್ಗುಡಾ ಪಾಮೇಡ್ ಪ್ರದೇಶದಲ್ಲಿ ನಕ್ಸಲೀಯರು ಮತ್ತು ಸಿಆರ್ ಪಿಎಫ್ ನಡುವೆ ಗುಂಡಿನ ಚಕಮಕಿ ನಡೆದಿತ್ತು.

ನಕ್ಸಲೀಯರ ಪ್ರತಿದಾಳಿಯಲ್ಲಿ ಸಿಆರ್ ಪಿಎಫ್ ಯೋಧ ಕಾಂತ ಪ್ರಸಾದ್ ಹುತಾತ್ಮರಾಗಿದ್ದು, ಇವರು ಸಿಆರ್ ಪಿಎಫ್ ನ 151 ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next