Advertisement
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಕೋರ್ಲಪರ್ತಿ, ತಲಕಾಯಲಬೆಟ್ಟ ವೆಂಕಟೇಶ್ವರ ಕೆರೆಗೆ ಬಾಗಿನ ಅರ್ಪಿಸಿ ಕೆರೆಯ ಕಟ್ಟೆ ಪರಿಶೀಲನೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ರಾಜ್ಯದ ಹಲವೆಡೆ ಮಳೆ ಹೆಚ್ಚಾಗಿ ಪ್ರವಾಹ ಉಂಟಾಗಿ ಜನ ಜಾನುವಾರು ಕೊಚ್ಚಿಹೋಗಿ ಮನೆಗಳು ಕುಸಿದು ಕೋಟ್ಯಂತರ ರೂ. ನಷ್ಟವಾಗಿದ್ದ ವೇಳೆ ನಮಗೆ ಮಳೆಯೇ ಇಲ್ಲ ಎಂದು ಅಂಗಲಾಚುತ್ತಿದ್ದ ನಮಗೆ, ಈಗ ಹೆಚ್ಚು ಮಳೆ ಆಗಿ, ತಾಲೂಕಿನ ಹತ್ತಾರು ಕೆರೆಗಳು ತುಂಬಿ ಕೋಡಿ ಹರಿದಿವೆ ಎಂದು ಹೇಳಿದರು.
Related Articles
Advertisement
ಸೇತುವೆಗಳ ದುರಸ್ತಿ: ಇನ್ನು ಚಿಲಕಲನೇರ್ಪು ಹೋಬಳಿಯಲ್ಲಿ ಹಲವು ಸೇತುವೆಗಳು ಕುಸಿದು ಜನ ಸಂಚಾರಕ್ಕೆ ತೊಂದರೆ ಆಗಿದ್ದರಿಂದ ಪ್ರವಾಹ ಪರಿಹಾರ ನಿಧಿಯಿಂದ ಅನುದಾನ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಏರಿ ಶೀಘ್ರದಲ್ಲಿ ಸೇತುವೆಗಳನ್ನು ದುರಸ್ತಿ ಮಾಡಲಾಗುವುದು ಎಂದು ತಿಳಿಸಿದರು.
ಹುಚ್ಚು ಸಾಹಸಕ್ಕೆ ಮುಂದಾಗಬೇಡಿ: ಇತ್ತೀಚಿಗೆ ಸುರಿದ ಭಾರೀ ಮಳೆಗೆ ಹಲವು ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ. ಉಕ್ಕಿ ಹರಿಯುತ್ತಿರುವ ನದಿಗಳ ದಡದಲ್ಲಿ, ಕೆರೆಗಳ ಕೋಡಿಗಳ ಬಳಿ ಹೋಗಿ ಸೆಲ್ಫಿ ತೆಗೆಯುವುದು, ಆಟವಾಡುವುದು, ಈಜು ವಂತಹ ಸಾಹಸಕ್ಕೆ ಹೋಗಬೇಡಿ, ನೆಮ್ಮದಿಯಿಂದ ಮನೆಗಳಲ್ಲಿ ಇರಿ ಎಂದು ಯುವಜನರಿಗೆ ಮನವಿ ಮಾಡಿದರು.
ಈ ವೇಳೆ ಮುಖಂಡರಾದ ಕೆ.ದೇವಗಾನಹಳ್ಳಿ ಮದ್ದಿರೆಡ್ಡಿ, ಪಾಪತಿಮ್ಮನಹಳ್ಳಿ ಮಲ್ಲಿಕಾರ್ಜುನರೆಡ್ಡಿ, ಕೋನಪರೆಡ್ಡಿ, ರಾಮಚಂದ್ರಾರೆಡ್ಡಿ, ಕೋರ್ಲಪರ್ತಿ ಗ್ರಾಪಂ ಮಾಜಿ ಸದಸ್ಯ ಕೆ.ವಿ.ವೆಂಕಟನಾರಾಯಣ, ಹಾಲಿ ಸದಸ್ಯ ವೇಣು, ಮಾಜಿ ತಾಪಂ ಸದಸ್ಯ ನಡಂಪಲ್ಲಿ ಶ್ರೀನಿವಾಸ್, ಕೆಂಚಾರ್ಲಹಳ್ಳಿ ಭಾಸ್ಕರ್, ಅನಪಲ್ಲಿ ಕೃಷ್ಣಾರೆಡ್ಡಿ ಉಪಸ್ಥಿತರಿದ್ದರು.