Advertisement

ಗದ್ದೆಗೆ ಉಪ್ಪುನೀರು ಹರಿದು ಬಂದು ಬೆಳೆಗಳು ನಾಶ! |Udayavani

03:52 PM Mar 04, 2021 | Team Udayavani |
ಗದ್ದೆಗೆ ಉಪ್ಪುನೀರು ಹರಿದು ಬಂದು ಬೆಳೆಗಳು ನಾಶ! | Crops destroyed after Saltwater flows into the fields | Udayavani ಕಟಪಾಡಿ ;ಮಟ್ಟುಗುಳ್ಳ ದ ಗದ್ದೆಗೆ ಉಪ್ಪುನೀರು ಏರಿ ಹರಿದುಬಂದು ಬೆಳೆಗಳು ನಾಶಗೊಂಡಿದೆ. ಕಳೆದ ಎರಡು ದಿನಗಳಿಂದ ಸಮುದ್ರದ ಉಬ್ಬರದ ನೀರು ಪಿನಾಕಿನಿ ಹೊಳೆಯ ಮೂಲಕ ಗದ್ದೆಯನ್ನು ಪ್ರವೇಶಿಸುತ್ತಿದೆ. ಮುಂಬರುವ ಮಳೆಗಾಲದವರೆಗೂ ಕೃಷಿ ಮಟ್ಟುಗುಳ್ಳ ಕ್ಕು ಬೆಳೆಯನ್ನು ಬೆಳೆಯಲು ಕಷ್ಟಸಾಧ್ಯ ಎಂದು ಈ ಭಾಗದ ರೈತರು ಪ್ರಮುಖರು, ಕೃಷಿಕರು ತಮ್ಮ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಕೈಪುಂಜಾಲು, ಭಟ್ಟರ ತೋಟ, ಇಳಿಸಂಜೆ, ಬ್ಯಾರಿ ತೋಟ ಪ್ರದೇಶದ ಸುಮಾರು 40 ಎಕರೆ ಪ್ರದೇಶಕ್ಕೆ ಉಪ್ಪು ನೀರು ನುಗ್ಗಿದ್ದು ಇದೇ ರೀತಿ ನಾವು ಸಂಕಷ್ಟ ಅನುಭವಿಸಬೇಕಿದೆ ಎಂದು ಪ್ರಮುಖರಾದ ಪರಮೇಶ್ವರ ಅಧಿಕಾರಿ, ಲಕ್ಷ್ಮಣ್ ಮಟ್ಟು, ವಾದಿರಾಜ ಅಧಿಕಾರಿ ಸಹಿತ ಬೆಳೆಗಾರರು ತಮ್ಮ ಅಳಲನ್ನು ಉದಯವಾಣಿಯೊಂದಿಗೆ ತೋಡಿಕೊಂಡಿದ್ದಾರೆ
Advertisement

Udayavani is now on Telegram. Click here to join our channel and stay updated with the latest news.

Next