Advertisement

ಬೆಳೆ ಹಾನಿ: ಪ್ರಾಣಿಗಳ ನಿಯಂತ್ರಣದ ಬಗ್ಗೆ ಅರಿವು ಅಗತ್ಯ

03:06 PM Sep 27, 2021 | Team Udayavani |

ದೊಡ್ಡಬಳ್ಳಾಪುರ: ರೈತರು ಬೆಳೆದ ಬೆಳೆಗಳನ್ನು ಇಲಿ, ಮೊದಲಾದ ಪ್ರಾಣಿ ಪೀಡೆಗಳು ನಾಶಪಡಿಸುವುದರೊಂದಿಗೆ ಹಲವಾರು ಆರೋಗ್ಯ ಸಮಸ್ಯೆ ತಂದೊಡ್ಡುತ್ತವೆ. ಈ ರೀತಿಯ ಪೀಡಕ ಪ್ರಾಣಿಗಳ ನಿಯಂತ್ರಣದ ಬಗ್ಗೆ ರೈತರು ಅರಿವು ಮೂಡಿಸಿಕೊಂಡು ವಿವಿಧ ತಂತ್ರಗಳ ಮೂಲಕ ಪ್ರಾಣಿಗಳ ಹಾವಳಿ ನಿಯಂತ್ರಿಸಿಕೊಳ್ಳಬೇಕಿದೆ ಎಂದು ಜಿಕೆವಿಕೆ ಪ್ರಾಧ್ಯಾಪಕ ಡಾ.ಮೋಹನ ನಾಯಕ್‌ ತಿಳಿಸಿದರು.

Advertisement

ತಾಲೂಕಿನ ವಡ್ಡರಹಳ್ಳಿಯಲ್ಲಿ ಬೆಂಗಳೂರು ಕೃಷಿ ವಿವಿಯ ಬಿಎಸ್ಸಿ(ಕೃಷಿ) ಅಂತಿಮ ವರ್ಷದವಿದ್ಯಾರ್ಥಿಗಳ ಸ್ಟೂಡೆಂಟ್‌ ರೆಡಿ ಕಾರ್ಯಕ್ರಮದಡಿ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ಕಶೇರುಕಪ್ರಾಣಿ ಪೀಡೆಗಳ ನಿರ್ವಹಣೆ ವಿಷಯ ಕುರಿತುಮಾತನಾಡಿದ ಅವರು, ರೈತರಿಗೆ ಪ್ರಮುಖ ಸಮಸ್ಯೆ ಎಂದರೆ ಬೆಳೆಗಳಿಗೆ ಇಲಿ ಕಾಟ. ಬಿತ್ತನೆಯಿಂದಕೊಯ್ಲಿನವರೆಗೆ, ಕೊಯ್ಲಿನಿಂದ ಮಾರುಕಟ್ಟೆಗೆ ಬೆಳೆ ಕೊಂಡೊಯ್ಯುವವರೆಗೆ ಪ್ರತಿ ಹಂತದಲ್ಲಿಯೂ ಇಲಿ ಕಾಟ ರೈತರಿಗೆ ತಪ್ಪಿದ್ದಲ್ಲ. ಒಮ್ಮೊಮ್ಮೆ ಅವು ಮಾಡುವ ನಷ್ಟ ಬಲು ದುಬಾರಿ. ಹೀಗಾಗಿ ಇಲಿಗಳಿಂದ ರೈತರ ಆದಾಯವೂ ಕುಂಠಿತವಾಗುತ್ತಿದೆ ಎಂದರು.

ಇಲಿಗಳು ಮನೆ, ಹೊಲ, ಗದ್ದೆ, ತೋಟ, ಮೈದಾನ ಹೀಗೆ ಎಲ್ಲ ಕಡೆ ವಾಸಿಸುತ್ತವೆ. ಇವುಗಳು ಪುಟ್ಟ ಜೀವಿಗಳಾಗಿದ್ದರೂ ಸಹ ರಾಷ್ಟ್ರದ ಆಹಾರಮತ್ತು ಆರ್ಥಿಕ ಪರಿಸ್ಥಿತಿಗಳ ಮೇಲೆ ಪರಿಣಾಮಬೀರುವುದರಿಂದ ಮನುಷ್ಯನಿಗೆ ಅನೇಕ ರೋಗಉಂಟು ಮಾಡುತ್ತವೆ. ಮುಖ್ಯವಾಗಿ ಆಮಶಂಕೆ, ಕಾಮಾಲೆ, ರಿಕೆಟ್ಸೆಯಾ, ಪ್ಲೇಗ್‌ ಮೊದಲಾದರೋಗಗಳನ್ನು ಹರಡುತ್ತವೆ. ಇಲಿಗಳಲ್ಲಿ ಹಲವಾರು ಪ್ರಬೇಧಗಳಿದ್ದು, ಅವುಗಳ ನಿಯಂತ್ರಣಕ್ಕೆ ಬೇರೆ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಎಂದರು.

ಗೋದಾಮುಗಳಲ್ಲಿ ಎಚ್ಚರವಹಿಸಿ: ಇಲಿಗಳನ್ನು ಜೀವಂತವಾಗಿ ಹಿಡಿಯಲು ಅಥವಾ ಕೊಲ್ಲಲು ಹಲವಾರು ಸಾಧನಗಳು ಈಗಾಗಲೇ ಮಾರುಕಟ್ಟೆ  ಯಲ್ಲಿ ಲಭ್ಯವಿದ್ದು, ಅವುಗಳನ್ನು ಬಳಸಿ ಇಲಿಗಳಹತೋಟಿ ಮಾಡಬಹುದು. ಬೋನ್‌ಗಳಲ್ಲಿ ಆಹಾರಇಟ್ಟು ಬೀಳಿಸಬಹುದು. ಆದರೆ, ಇಲಿಗಳು ಬಿದ್ದ ನಂತರ ಅವರನ್ನು ವಿಲೇವಾರಿ ಮಾಡಿ ನಂತರ ಬೋನ್‌ ಸೋಪು ನೀರಿನಿಂದ ಚೆನ್ನಾಗಿತೊಳೆಯಬೇಕು. ಇಲ್ಲವಾದಲ್ಲಿ ಇಲಿಗಳು ಹೊರಸೂಸಿದ್ದ ರಾಸಾಯನಿಕದ ವಾಸನೆಗೆ ಬೇರೆ ಇಲಿಗಳುಬೋನ್‌ಗಳಿಗೆ ಬೀಳುವುದಿಲ್ಲ. ಧಾನ್ಯಗಳನ್ನುಸಂಗ್ರಹಿಸುವ ಗೋದಾಮುಗಳಲ್ಲಿ ಇಲಿಗಳ ಪ್ರವೇಶ ಆಗದಂತೆ ಎಚ್ಚರ ವಹಿಸಬೇಕು ಎಂದರು.

ಕಾನೂನಿನ ನಿಯಂತ್ರಣವಿದೆ: ಬೆಳೆಗಳಿಗೆ ಹಾನಿ ಮಾಡುವ ಎಲ್ಲ ಪ್ರಾಣಿಗಳನ್ನು ಕೊಲ್ಲಲು ಕಾನೂನಿನ ನಿಯಂತ್ರಣವಿದೆ. ಉದಾಹರಣೆಗೆ ನವಿಲುಗಳು. ನವಿಲುಗಳು ಭಾರದಂತೆ ಸೆಣಬಿನ ದರವನ್ನು ಬೆಳೆ ಅಂತಿಮ ಹಂತಕ್ಕೆ ಬಂದಾಗ ಬೆಳೆಯ ಬೇಲಿ ಸುತ್ತಲೂ ಕಟ್ಟಬೇಕಿದೆ. ಬೆಳೆಗಳ ಹಾವಳಿ ಮಾಡುವ ಪ್ರಾಣಿಗಳ ನಿಯಂತ್ರಣದ ಬಗ್ಗೆ ಕೃಷಿ ಅಧಿಕಾರಿಗಳನ್ನು ಭೇಟಿ ಮಾಡಿ ಸಲಹೆಗಳನ್ನು ಪಡೆಯಬಹುದಾಗಿದೆ ಎಂದರು. ಜಿಕೆವಿಕೆ ಸಹಾಯಕ ಪ್ರಾಧ್ಯಾಪಕ ಡಾ.ಕೆ.ರವಿಕಿರಣ್‌, ಸಹಾಯಕ ಸಂಶೋಧಕ ಡಾ.ಬಸವ ದರ್ಶನ, ಸಿಬ್ಬಂದಿಚಂದ್ರಶೇಖರ್‌, ಕಂಟನಕುಂಟೆ ಗ್ರಾಪಂ ಅಧ್ಯಕ್ಷೆ ಶೋಭಾ, ಸದಸ್ಯ ರಾಮಚಂದ್ರ ರೆಡ್ಡಿ, ಶ್ರೀನಿವಾಸ ರೆಡ್ಡಿ, ಗ್ರಾಮಸ್ಥರು ಹಾಗೂ ವಿದ್ಯಾರ್ಥಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next