Advertisement

ಕಡಬ : ನೀರ ಬಿಟ್ಟು ರಸ್ತೆಗೆ ಬಂದ ಮೊಸಳೆ!

09:13 AM Nov 05, 2022 | Team Udayavani |

ಆಲಂಕಾರು/ಕಡಬ : ಕಡಬ ತಾಲೂಕಿನ ಆಲಂಕಾರು ಕೊಂಡಾಡಿಕೊಪ್ಪ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರದ ರಸ್ತೆಯಲ್ಲಿ ಶುಕ್ರವಾರ ಮುಂಜಾನೆ ಮೊಸಳೆಯೊಂದು ಪತ್ತೆಯಾಗಿದೆ.

Advertisement

ಬೆಳಗಿನ ಜಾವ ರಬ್ಬರ್‌ ಟ್ಯಾಪಿಂಗ್‌ಗೆ ಹೊರಟಿದ್ದ ಸ್ಥಳೀಯ ನಿವಾಸಿ ಶೀನಪ್ಪ ಕುಂಬಾರ ಅವರು ಮೊಸಳೆಯೊಂದು ತೆವಳಿಕೊಂಡು ರಸ್ತೆ ದಾಟುತ್ತಿರುವುದನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

ಅರಣ್ಯ ಇಲಾಖೆಯ ಸಿಬಂದಿಗಳಾದ ಬಾಲಚಂದ್ರ ಗೌಡ ಮತ್ತು ರವಿಕುಮಾರ್‌ ಕೂಡಲೇ ಸ್ಥಳಕ್ಕೆ ಅಗಮಿಸಿ, ಸ್ಥಳೀಯರಾದ ಶೀನಪ್ಪ ಕುಂಬಾರ, ಕಿರಣ್‌ ಕೊಂಡಾಡಿ ಮತ್ತು ಧರ್ಮಸ್ಥಳ ಶೌರ್ಯ ತಂಡದ ಕಾರ್ಯಕರ್ತರಾದ ಹರೀಶ್‌, ವಿನೋದ್‌ ಮುಂತಾದವರ ಜತೆಗೂಡಿ ಮೊಸಳೆಯನ್ನು ಹಿಡಿದು ಸುರಕ್ಷಿತವಾಗಿ ಕುಮಾರಧಾರಾ ನದಿಗೆ ಬಿಟ್ಟರು.

ಬೀಡುಬಿಟ್ಟಿರುವ ಮೊಸಳೆಗಳು
ಕುಮಾರಧಾರಾ ನದಿಯಲ್ಲಿ ಮೊಸಳೆಗಳ ಸಂಖ್ಯೆ ಹೆಚ್ಚುತ್ತಿದ್ದು, ಇತ್ತೀಚಿನ ದಿನಗಳಲ್ಲಿ ನದಿ ತಟದಲ್ಲಿರುವ ಆಲಂಕಾರು ಗ್ರಾಮದ ಕೊಂಡಾಡಿ ಕೊಪ್ಪ, ಏಂತಡ್ಕ, ಶಾಂತಿಮೊಗೆರು, ಪಜ್ಜಡ್ಕ, ಕಕ್ವೆ ಭಾಗಗಳ ಹಲವು ತೋಟಗಳ ಕೆರೆಗಳಲ್ಲಿ ಆಗಾಗ ಮೊಸಳೆಗಳು ಕಾಣಸಿಗುತ್ತಿ¤ವೆ. ಆಗಾಗ ಮೇಲೆ ಬಂದು ಸಂಚಾರಕ್ಕೆ ಹೊರಡುವುದೂ ಸಾಮಾನ್ಯವಾಗಿದೆ. ಕಳೆದ ವರ್ಷ ಪಜ್ಜಡ್ಕದ ಕೆರೆಯಲ್ಲಿ ಠಿಕಾಣಿ ಹೂಡಿದ್ದ ಮೊಸಳೆಯನ್ನು ಅರಣ್ಯ ಇಲಾಖೆಯವರು ಹಿಡಿದು ಕುಮಾರಧಾರಾ ನದಿಗೆ ಬಿಟ್ಟಿದ್ದರು.

ಜನ ಸಂಚಾರ ಇರುವ ಪ್ರದೇಶಗಳಲ್ಲಿ ಮೊಸಳೆಗಳ ಸಂಚಾರ ಹೆಚ್ಚುತ್ತಿರುವುದರಿಂದ ನಾಗರಿಕರು ಭೀತಿಗೊಳಗಾಗಿದ್ದು, ಅರಣ್ಯ ಇಲಾಖೆಯವರು ತತ್‌ಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Advertisement

ಇದನ್ನೂ ಓದಿ : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಎನ್ಐಎ ಅಧಿಕಾರಿಗಳಿಂದ ಮತ್ತೆ ಮೂವರ ಬಂಧನ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next