Advertisement

ಬೇರೆ ಬೇರೆ ದೇಶಗಳಿಂದ ಕೇಂದ್ರದ ನಡೆ ಬಗ್ಗೆ ಟೀಕೆ ಬರುತ್ತಿದೆ: ಡಿ.ಕೆ ಶಿವಕುಮಾರ್

10:12 AM Feb 20, 2022 | Team Udayavani |

ಬೆಂಗಳೂರು: ಯಾರ್ಯಾರು ಏನೇನು ಮಾತಾಡುತ್ತಿದ್ದಾರೋ ಮಾತನಾಡಲಿ, ನಿನ್ನೆ ಖರ್ಗೆಯವರು ಬಂದು ಬೆಂಬಲ ಕೊಟ್ಟರು, ಬೇರೆ ರಾಜ್ಯಗಳಿಂದಲೂ ಕರೆ ಬರುತ್ತಿವೆ, ಕರ್ನಾಟಕದ ಕಾಂಗ್ರೆಸ್ ಶಾಸಕರು ಒಳ್ಳೇ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರಣಿ ಮಾಡುತ್ತಿರುವುದು ಒಳ್ಳೆಯದು ಅಂತ ಬೇರೆ ರಾಜ್ಯಗಳ ರಾಜಕಾರಣಿಗಳು ಹೇಳುತ್ತಿದ್ದಾರೆ ಎಂದು ಖರ್ಗೆ ಹೇಳಿದರು. ಈಶ್ವರಪ್ಪ ಹೇಳಿಕೆಗೆ ಎಲ್ಲೆಡೆ ವಿರೋಧ ಬರುತ್ತಿದೆ. ಸಿಂಗಾಪುರ ಪಿಎಂ ಕೇಂದ್ರ ಸರ್ಕಾರದ ಬಗ್ಗೆ ಮಾತಾಡಿದ್ದಾರೆ. ಬೇರೆ ಬೇರೆ ದೇಶಗಳಿಂದ ಕೇಂದ್ರದ ನಡೆ ಬಗ್ಗೆ ಟೀಕೆ ಬರುತ್ತಿದೆ ಎಂದರು.

ಈಶ್ವರಪ್ಪ ಹೇಳಿಕೆ ವೈಯಕ್ತಿಕ ಅಲ್ಲ. ನಾಳೆ ನಮ್ಮ ಎಲ್ಲ ಕಾರ್ಯಕರ್ತರೂ ತಹಸೀಲ್ದಾರ್ ರಿಗೆ ಮನವಿ ಕೊಡುತ್ತಾರೆ. ನಮ್ಮ ಹೋರಾಟ ಮುಂದುವರೆಯಲಿದೆ. ನಮ್ಮ ಹೋರಾಟ ನಿಲ್ಲಲ್ಲ. ಸಿಎಂಗೆ ಸ್ವಾಭಿಮಾನ ಇದ್ದಿದ್ದರೆ ಈ ಹರಕಲು ಬಾಯಿಯ ಈಶ್ವರಪ್ಪರನ್ನು ವಜಾ ಮಾಡಬೇಕಿತ್ತು. ನಿರಾಣಿ ಸಿಎಂ‌ ಆಗುತ್ತಾರೆ ಅಂತ ಈಶ್ವರಪ್ಪ ಹೇಳಿದಾಗಲೇ ಅವರನ್ನು ಸಿಎಂ ವಜಾ ಮಾಡಬೇಕಿತ್ತು. ಯಡಿಯೂರಪ್ಪ ವಿರುದ್ಧವೇ ಈಶ್ವರಪ್ಪ ರಾಜ್ಯಪಾಲರಿಗೆ ದೂರು ಕೊಟ್ಟರು. ಈಶ್ವರಪ್ಪ ಯಾರಿಗೂ ನಿಷ್ಟರಾಗಿಲ್ಲ ಎಂದು ಹೇಳಿದರು.

ಇದನ್ನೂ ಓದಿ:ಈಶ್ವರಪ್ಪ ಹೇಳಿಕೆ, ಇಡೀ ಪಕ್ಷದ ಹೇಳಿಕೆ: ಸಚಿವ ಯು.ಟಿ ಖಾದರ್

ನಾನು ಅಧ್ಯಕ್ಷ ಆದಾಗಾ ಎಲ್ಲರಿಗೂ ಕರೆದುಕೊಂಡು ಹೋಗಬೇಕಿತ್ತು. ಆವತ್ತು ಅಗಿರಲಿಲ್ಲ. ಹೀಗಾಗಿ ಪ್ರಮುಖ ನಾಯಕರನ್ನು ಕರೆದುಕೊಂಡು ದೆಹಲಿಗೆ ಹೋಗುತ್ತಿದ್ದೇವೆ, ಅಲ್ಲಿ ನಮ್ಮ ಅಭಿಪ್ರಾಯ ನೀಡಲಿದ್ದೇವೆ. ಯಾರು ಯಾವ ಕೆಲಸ ಮಾಡಬೇಕು, ಯಾವ ವಿಚಾರ ಎತ್ಕೊಂಡು ಕೆಲಸ ಮಾಡಬೇಕು ಅಂತ ಅಲ್ಲಿ ಹೇಳುತ್ತಾರೆ. ಈ ಬಗ್ಗೆ‌ ಶಾಸಕರಿಗೆ ಟ್ರೈನಿಂಗ್ ಕೊಡಬೇಕು. ಹೈಕಮಾಂಡ್ ನೇತೃತ್ವದ ತರಬೇತಿ ನಡೆಯುತ್ತದೆ. ದೇಶದ ಆರ್ಥಿಕ ಪರಿಸ್ಥಿತಿ ಕಷ್ಟದಲ್ಲಿ ಇದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next