Advertisement

ವಿರಾಜಪೇಟೆ: ಗಾಂಜಾ ಮಾರಾಟಕ್ಕೆ ಯತ್ನ ಮೂವರು ಆರೋಪಿಗಳ ಬಂಧನ

07:34 PM Jul 22, 2022 | Team Udayavani |

ಮಡಿಕೇರಿ: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ವಿರಾಜಪೇಟೆ ನಗರ ಪೊಲೀಸರು ಬಂಧಿಸಿದ್ದಾರೆ.

Advertisement

ಅಂಬಟ್ಟಿ ಗ್ರಾಮದ ನಿವಾಸಿ ಕೆ.ಹೆಚ್‌. ನಿಜಾಮುದ್ದೀನ್‌ (31), ಬಿಟ್ಟಂಗಾಲ ಗ್ರಾಮದ ನಿವಾಸಿ ಪಿ.ಡಿ.ಸೋಮಯ್ಯ (ರೋಷನ್‌-25), ಪಿ.ಸಿ.ಕವನ್‌ ಮಾದಯ್ಯ (22) ಬಂಧಿತ ಆರೋಪಿಗಳು.

ವಿರಾಜಪೇಟೆಯ ಪಂಜರು ಗಣಪತಿ ಬೀದಿ ಕಡೆಯಿಂದ ನಿಸರ್ಗ ಬಡಾವಣೆಗೆ ತೆರಳುವ ರಸ್ತೆ ಸಮೀಪದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಕಾರು, 1 ಕೆ.ಜಿ. 650 ಗ್ರಾಂ ಗಾಂಜಾ ಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಕೊಡಗು ಪೊಲೀಸ್‌ ಅಧೀಕ್ಷಕ ಮತ್ತು ವಿರಾಜಪೇಟೆ ಉಪವಿಭಾಗ ಪೊಲೀಸ್‌ ಉಪಧೀಕ್ಷಕರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕರಾದ ಶಿವರುದ್ರ ಅವರ ನಿರ್ದೇಶನದ ಮೇರೆಗೆ ವಿರಾಜಪೇಟೆ ನಗರ ಪೊಲೀಸ್‌ ಠಾಣೆಯ ಪಿ.ಎಸ್‌.ಐ ಸಿ.ವಿ.ಶ್ರೀಧರ್‌, ಸಿಬ್ಬಂದಿಗಳಾದ ಗಿರೀಶ್‌, ಮುಸ್ತಾಫ‌, ಧರ್ಮ, ರಜನ್‌ ಕುಮಾರ್‌ ಸುಬ್ರಮಣಿ, ಮಧು ಸತೀಶ, ಸಾಗರ್‌, ಶೆಟ್ಟಪ್ಪ ಗೀತಾ, ಗೋವಿಂದ ಲಮಾಣಿ ಕಾರ್ಯಾಚರಣೆ ನಡೆಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next