Advertisement

ಉಳ್ಳಾಲ: ಈರುಳ್ಳಿ ಸಾಗಾಟದ ಲಾರಿ ಕಮರಿಗೆ; ಮೂವರು ಪಾರು

10:24 PM May 13, 2022 | Team Udayavani |

ಉಳ್ಳಾಲ: ಮಹಾರಾಷ್ಟ್ರದಿಂದ ಕೇರಳ ಕಡೆಗೆ ಈರುಳ್ಳಿ ಸಾಗಾಟ ನಡೆಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಉರುಳಿ ಬಿದ್ದ ಘಟನೆರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಕಾಪಿಕಾಡು ಬಳಿ ಶುಕ್ರವಾರ ಸಂಭವಿಸಿದೆ.

Advertisement

ಈ ಘಟನೆಯಲ್ಲಿ ಲಾರಿಯಲ್ಲಿದ್ದ ಮೂವರು ಸಣ್ಣಪುಟ್ಟ ಗಾಯಗೊಳೊಂದಿಗೆ ಪವಾಡಸದೃಶ್ಯವಾಗಿ ಪಾರಾಗಿದ್ದಾರೆ.
ತೊಕ್ಕೊಟ್ಟು ಓವರ್‌ ಬ್ರಿಡ್ಜ್ ಮಾರ್ಗವಾಗಿ ವೇಗವಾಗಿ ಬರುತ್ತಿದ್ದ ಲಾರಿ ಕಾಪಿಕಾಡ್‌ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದೆ.

ಈ ಪ್ರದೇಶದಲ್ಲಿ ಈ ಹಿಂದೆ ಕಾರು ಚಾಲಕನನ್ನು ಉಳಿಸಲು ಹೋಗಿ ಕಾರುಗಳನ್ನು ಹೇರಿಕೊಂಡು ಬಂದಿದ್ದ ಕಂಟೈನರ್‌ ಲಾರಿಯೊಂದು ಜಾರಿ ಚರಂಡಿಗೆ ಬಿದ್ದಿತ್ತು.

ಲಾರಿಯಲ್ಲಿದ್ದ ಈರುಳ್ಳಿ ತುಂಬಿದ್ದ ಗೋಣಿ ಚೀಲಗಳು ಹೊರಗೆ ಬಿದ್ದಿವೆ. ಘಟನೆಯಿಂದ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದ್ದು ದಕ್ಷಿಣ ಸಂಚಾರ ವಿಭಾಗದ ಪೊಲೀಸರು ಆಗಮಿಸಿ ವಾಹನಗಳನ್ನು ತೆರವುಗೊಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next