Advertisement

ಹೂಡೆ ಬೀಚ್‌: ನೀರುಪಾಲಾದ ವಿದ್ಯಾರ್ಥಿಯ ಮೃತದೇಹ ಪತ್ತೆ

11:10 PM Sep 26, 2022 | Team Udayavani |

ಮಲ್ಪೆ: ಹೂಡೆ ಬೀಚ್‌ನಲ್ಲಿ ರವಿವಾರ ಸಂಜೆ ನೀರಿಗೆ ಇಳಿದಿದ್ದ ಮಣಿಪಾಲದ ಮೂವರು ವಿದ್ಯಾರ್ಥಿಗಳು ನೀರು ಪಾಲಾಗಿದ್ದು, ಅವರಲ್ಲಿ ಇಬ್ಬರ ಮೃತದೇಹ ಸ್ವಲ್ವ ಸಮಯದಲ್ಲೆ ಪತ್ತೆಯಾಗಿದ್ದು, ನಾಪತ್ತೆಯಾಗಿದ್ದ ಮತ್ತೋರ್ವ ಹೈದರಾಬಾದ್‌ನ ಶ್ರೀಕರ (19)ನ ಮೃತದೇಹ ಸೋಮವಾರ ಬೆಳಗ್ಗೆ ಆದೇ ಜಾಗದಲ್ಲಿ ಪತ್ತೆಯಾಗಿದೆ.

Advertisement

ಸೋಮವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಸಮುದ್ರ ತೀರದಲ್ಲಿ ತೇಲುತ್ತಿದ್ದ ಮೃತದೇಹವನ್ನು ಮುಳುಗು ತಜ್ಞ ಈಶ್ವರ್‌ ಮಲ್ಪೆ ಅವರು ದಡಕ್ಕೆ ತಂದಿದ್ದಾರೆ. ರವಿವಾರ ರಾತ್ರಿ 10 ಗಂಟೆಯ ವರೆಗೆ ಕರಾವಳಿ ಕಾವಲು ಪಡೆ, ಸ್ಥಳೀಯರ ಜತೆ ಈಶ್ವರ ಅವರು ಹುಡುಕಾಟ ನಡೆಸಿದ್ದರು.

ವಾರಾಂತ್ಯ ರಜೆಯ ಹಿನ್ನೆಲೆಯಲ್ಲಿ ಎಂಐಟಿಯ 15 ಕಂಪ್ಯೂಟರ್‌ ಸೈನ್ಸ್‌ ವಿದ್ಯಾರ್ಥಿಗಳು ಹೂಡೆ ಬೀಚ್‌ಗೆ ವಿಹಾರಕ್ಕೆಂದು ತೆರಳಿದ್ದರು.

ಸಮುದ್ರದಲ್ಲಿ ಈಜಾಡುತ್ತಿರುವ ವೇಳೆ ಮೂವರು ನೀರಿನಲ್ಲಿ ಮುಳುಗಿದ್ದರು. ಈ ಪೈಕಿ ಬೆಂಗಳೂರಿನ ಷಣ್ಮುಖ ಮತ್ತು ನಿಶಾಂತ್‌ ರವಿವಾರ ತೀವ್ರ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವಾಗಲೇ ಮೃತಪಟ್ಟಿದ್ದರು. ಮೂವರು ಸಹಪಾಠಿಗಳ ಸಾವಿನಿಂದಾಗಿ ಮಣಿಪಾಲ ಕಾಲೇಜಿನಲ್ಲಿ ಸೂತಕದ ಛಾಯೆ ಆವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next