Advertisement

ಉಡುಪಿ: ಕಾರು ಓವರ್‌ ಟೇಕ್‌ ಮಾಡಿದ್ದಕ್ಕೆ ವ್ಯಕ್ತಿಯೋರ್ವರಿಗೆ ಹಲ್ಲೆ

12:13 AM May 24, 2022 | Team Udayavani |

ಉಡುಪಿ: ಕಾರನ್ನು ಓವರ್‌ಟೇಕ್‌ ಮಾಡಿದ್ದಾರೆ ಎಂಬ ಕಾರಣಕ್ಕೆ ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

Advertisement

ಕಟಪಾಡಿಯ ಚೇತನರಾಜ್‌ ಮೇ 22 ರಂದು ಕಾರಿನಲ್ಲಿ ಸರಳೇಬೆಟ್ಟಿನಿಂದ ಮಣಿಪಾಲದ ಟೈಗರ್‌ ಸರ್ಕಲ್‌ ಮಾರ್ಗವಾಗಿ ಉಡುಪಿ ಕಡೆಗೆ ಹೋಗುತ್ತಿರುವಾಗ ಸಿಂಡಿಕೇಟ್‌ ಸರ್ಕಲ್‌ ಬಳಿ ಅಕ್ರಮ್‌ ಮತ್ತು ಸೈಫ್ ಚಲಾಯಿಸಿಕೊಂಡು ಹೋಗುತ್ತಿದ್ದ ಫಾರ್ಚೂನ್‌ ಕಾರನ್ನು ಓವರ್‌ ಟೇಕ್‌ ಮಾಡಿದ್ದರು.

ಆರೋಪಿಗಳು ಚೇತನರಾಜ್‌ ಕಾರನ್ನು ಹಿಂಬಾಲಿಸಿ ಇಂದ್ರಾಳಿಯಲ್ಲಿ ತಡೆದು ನಿಲ್ಲಿಸಿ ಕೈಯಿಂದ ಹಲ್ಲೆ ಮಾಡಿ ಅವರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಮಣಿಪಾಲದ ಪೆರಂಪಳ್ಳಿ ರಸ್ತೆ ಯಲ್ಲಿರುವ ಎಕೆಎಂಎಸ್‌ ಕಚೇರಿಗೆ ಕರೆದುಕೊಂಡು ಹೋಗಿ ತಲವಾರು, ಸ್ಟಂಪ್‌ನಿಂದ ಸೈಫ್, ಅಕ್ರಮ್‌ ಹಾಗೂ ಶರೀಫ್ ಸೇರಿ ಹಲ್ಲೆ ಮಾಡಿದ್ದಾರೆ.

ಪರಿಣಾಮ ಚೇತನರಾಜ್‌ ಅವರ ಎಡಗೈಯ ಮೂಳೆ ಮುರಿತವಾಗಿದೆ. ದೂರು ನೀಡಿದಲ್ಲಿ ಇದು ನಿನಗೆ ಕೊನೆಯ ಎಚ್ಚರಿಕೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next