Advertisement

ಪತಿಯಿಂದ ಪತ್ನಿಗೆ ಮಾರಾಣಾಂತಿಕ ಹಲ್ಲೆ ; ದೂರು ದಾಖಲು

12:59 AM May 18, 2022 | Team Udayavani |

ಉಡುಪಿ: ಪತ್ನಿಗೆ ಪತಿ ಮಾರಾಣಾಂತಿಕ ಹಲ್ಲೆ ನಡೆಸಿದ ಘಟನೆ ಅಂಬಾಗಿಲಿನಲ್ಲಿ ನಡೆದಿದೆ.
14 ವರ್ಷಗಳ ಹಿಂದೆ ಪೂರ್ಣಿಮಾ ಅವರು ವೆಂಕಟರಾಜ್‌ನನ್ನು ವಿವಾಹವಾಗಿದ್ದು, ಅಂಬಾಗಿಲಿನ ಫ್ಲ್ಯಾಟ್‌ವೊಂದರಲ್ಲಿ ವಾಸವಾಗಿದ್ದರು.

Advertisement

ಇವರಿಗೆ ಓರ್ವ ಮಗನಿದ್ದಾನೆ. ಕಳೆದ 2-3 ವರ್ಷದಿಂದ ಪೂರ್ಣಿಮಾ ಹಾಗೂ ಆರೋಪಿ ವೆಂಕಟರಾಜ್‌ಮಧ್ಯೆ ವೈಮನಸ್ಸು ಉಂಟಾಗಿದ್ದು, ಆತ ಪತ್ನಿ ಹಾಗೂ ಮಗನಿಗೆ ಖರ್ಚಿಗೆ ಹಣ ಕೊಡುತ್ತಿರಲಿಲ್ಲ.

ಅವಾಚ್ಯ ಶಬ್ದಗಳಿಂದ ಬೈಯುವುದು, ಹೊಡೆಯುವುದು ಮಾಡುತ್ತಿದ್ದನು. ಇದರಿಂದ ಬೇಸತ್ತು ಪೂರ್ಣಿಮಾ 3 ತಿಂಗಳಿಂದ ಮಗನೊಂದಿಗೆ ತವರು ಮನೆಯಲ್ಲಿ ವಾಸವಾಗಿದ್ದರು. ಮೇ 16ರಂದು ಪೂರ್ಣಿಮಾ ಬಟ್ಟೆ ತರಲು ಗಂಡನ ಮನೆಯಾದ ತಾಂಗದಗಡಿಗೆ ಹೋಗಿ ಮನೆಯೊಳಗಿದ್ದ ಗೋದ್ರೇಜ್‌ನ ಬಾಗಿಲು ತೆಗೆಯುತ್ತಿದ್ದಾಗ ವೆಂಕಟರಾಜ್‌ ಆಗಮಿಸಿ ಅವಾಚ್ಯ ವಾಗಿ ಬೈದು ಕೈಯಿಂದ ಹೊಡೆದಿದ್ದಾನೆ.

ಈ ವೇಳೆ ಆರೋಪಿಗಳಾದ ನಾಗರಾಜ, ಗೋಪಿ ನೆಲ ಒರೆಸುವ ಕೋಲಿನಿಂದ ಪೂರ್ಣಿಮಾ ಅವರ ತಲೆಗೆ ಹೊಡೆದಿದ್ದಾರೆ. ಪರಿಣಾಮ ಪೂರ್ಣಿಮಾ ತಲೆ ತಿರುಗಿ ಬಿದ್ದಿದ್ದು, ಪೂರ್ಣಿಮಾ ಅವರ ಜತೆ ಬಂದಿದ್ದ ತಂಗಿ ಹಾಗೂ ಮಗ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಉಡುಪಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next