Advertisement

ಹಳೇಹುಬ್ಬಳ್ಳಿ: ಆರ್ಥಿಕ ಬೆಳವಣಿಗೆ ಸಹಿಸಲಾಗದೆ ದಾಯಾದಿಗಳಿಂದಲೇ ಮಾರಾಣಾಂತಿಕ ಹಲ್ಲೆ

03:18 PM Oct 07, 2022 | Team Udayavani |

ಹುಬ್ಬಳ್ಳಿ: ಕ್ಷುಲ್ಲಕ ವಿಷಯವಾಗಿ ದಾಯಾದಿಗಳೇ ಸಹೋದರರಿಬ್ಬರಿಗೆ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಗುರುವಾರ ರಾತ್ರಿ ಹಳೇಹುಬ್ಬಳ್ಳಿಯ ಕಟಗರ ಓಣಿಯಲ್ಲಿ ನಡೆದಿದೆ.

Advertisement

ಘಟನೆಯಲ್ಲಿ ಉಮೇಜವುಲ್ಲಾ ಬೇಪಾರಿ ಹಾಗೂ ಆವೇಜ್ ಬೇಪಾರಿ ಗಾಯಗೊಂಡಿದ್ದು, ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರ್ಥಿಕ ಬೆಳವಣಿಗೆ ಸಹಿಸಲಾಗದೆ ಹಾಗೂ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಇವರ ಚಿಕ್ಕಪ್ಪನ ಮಗನಾದ ಬಾಬಾಸಾದಿಕ್ ಎಂಬಾತನು ಗುರುವಾರ ರಾತ್ರಿ 8-10 ಜನರ ಗುಂಪು ಕಟ್ಟಿಕೊಂಡು ಬಂದು ಕಟಗರ ಓಣಿ ಉರ್ದು ಶಾಲೆ ಹತ್ತಿರದ ಉಮೇಜವುಲ್ಲಾ ಕಚೇರಿಗೆ ನುಗ್ಗಿ ಕಣ್ಣಿಗೆ ಖಾರದ ಪುಡಿ ಎರಚಿ, ತಲ್ವಾರನಿಂದ ಸಹೋದರರಿಗೆ ಮಾರಣಾಂತಿಕ ಗಾಯಗೊಳಿಸಿದ್ದು, ಕಸಬಾಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕೆರೆಯಂಗಳದಲ್ಲಿ ನುಂಗಣ್ಣರದೇ ದರ್ಬಾರ್‌; ರೆಸಾರ್ಟ್‌-ಹೋಟೆಲ್‌ ಉದ್ಯಮಕ್ಕೂ ಜಾಗ

Advertisement

Udayavani is now on Telegram. Click here to join our channel and stay updated with the latest news.

Next