Advertisement

ಆರೋಪಿಯಿಂದ ಹಣ ಸುಲಿಗೆ: ಗ್ರಾ.ಪಂ. ಸದಸ್ಯನ ಬಂಧನ

10:33 PM May 13, 2022 | Team Udayavani |

ಮಂಗಳೂರು: ದರೋಡೆ ಪ್ರಕರಣವೊಂದರ ಆರೋಪಿಯಿಂದ ಹಣ ಸುಲಿಗೆ ಮಾಡಿದ ಗ್ರಾ. ಪಂ. ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಪಾವೂರು ಗ್ರಾ. ಪಂ. ಸದಸ್ಯ ಪಾವೂರು ಅಕ್ಷರ ನಗರದ ಮಲಾರ್‌ಮನೆಯ ಅಬ್ದುಲ್‌ ಖಾದರ್‌ ರಿಜ್ವಾನ್ (28) ಬಂಧಿತ ಆರೋಪಿ.

2021ರ ಡಿಸೆಂಬರ್‌ನಲ್ಲಿ ಸುರತ್ಕಲ್‌ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಓರ್ವ ಆರೋಪಿಗಾಗಿ ಪೊಲೀಸರು ಹುಡುಕಾಡುತ್ತಿದ್ದರು.

ಈ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಆರೋಪಿಯನ್ನು ಸಂಪರ್ಕಿಸಿ ಪೊಲೀಸರಿಗೆ ಹಣ ನೀಡಿ ಪ್ರಭಾವ ಬೀರಿ ಕೇಸಿನಿಂದ ಹೆಸರು ತೆಗೆಯುವುದಾಗಿ ಆಮಿಷವೊಡ್ಡಿದರು. ಅದಕ್ಕಾಗಿ 3 ಲಕ್ಷ ರೂ ನೀಡುವಂತೆ ಬೇಡಿಕೆಯಿಟ್ಟರು. ಹಂತ ಹಂತವಾಗಿ 2.95 ಲಕ್ಷ ರೂ. ಪಡೆದುಕೊಂಡಿದ್ದರು. ತನ್ನನ್ನು ಪೊಲೀಸರು ಹುಡುಕುತ್ತಿರುವ ಮಾಹಿತಿ ಪಡೆದ ದರೋಡೆ ಪ್ರಕರಣದ ಆರೋಪಿ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದನು. ಅನಂತರ ಈತ ತನ್ನಿಂದ ಹಣ ಪಡೆದವರಲ್ಲಿ ಹಣ ವಾಪಸು ನೀಡುವಂತೆ ಹೇಳಿದಾಗ ಹಣ ಪಡೆದವರು ಜೀವಬೆದರಿಕೆ ಹಾಕಿದ್ದರು.

ಅಲ್ಲದೆ 30,000 ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು. ಹಣ ಕಳೆದುಕೊಂಡ ವ್ಯಕ್ತಿ ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next