Advertisement

ಮಲ್ಪೆ: ಬೋಟಿನಿಂದ ಕಾಲುಜಾರಿ ನೀರಿಗೆ ಬಿದ್ದು ಮೀನುಗಾರ ಸಾವು

11:48 PM Oct 07, 2022 | Team Udayavani |

ಮಲ್ಪೆ: ಮಲ್ಪೆ ಮೀನುಗಾರಿಕೆ ಬಂದರಿನ 2ನೇ ಟಿ – ಜೆಟ್ಟಿಯ ಬಳಿ ಬೋಟಿನಿಂದ ಮೀನುಗಾರ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ಅ.7ರಂದು ಸಂಭವಿಸಿದೆ.

Advertisement

ಹೆಜಮಾಡಿಯ ಮೀನುಗಾರ ರಮೇಶ್‌ ಕೋಟ್ಯಾನ್‌ (75) ಅವರು ಮೃತರು. ಅವರು ಗುರು ರಾಘವೇಂದ್ರ ಬೋಟಿನಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದರು. ಮುಂಜಾನೆ 4 ಗಂಟೆಗೆ ಹೆಜಮಾಡಿಯ ಮನೆಯಿಂದ ಮಲ್ಪೆಗೆ ಹೊರಟಿದ್ದು, ಸುಮಾರು 5.30ರ ವೇಳೆಗೆ ಮೀನುಗಾರಿಕೆಗೆ ತೆರಳುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

ಬೆಳಗ್ಗೆ 7. 30ಕ್ಕೆ ಅವರ ಮೃತದೇಹ ಬಂದರಿನ ದಕ್ಕೆಯ ನೀರಿನಲ್ಲಿ ಪತ್ತೆಯಾಗಿದ್ದು ಮುಳುಗು ತಜ್ಞ ಈಶ್ವರ್‌ ಮಲ್ಪೆ ಅವರು ಮೇಲೆತ್ತಿದ್ದಾರೆ. ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next