Advertisement

ಕಾರುಗಳ ನಡುವೆ ಅಪಘಾತ: ಸುಂಟಿಕೊಪ್ಪದ ವ್ಯಕ್ತಿ ಸಾವು

05:40 PM May 18, 2022 | Team Udayavani |

ಮಡಿಕೇರಿ: ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೊಡಗರಹಳ್ಳಿಯಲ್ಲಿ ಸಂಭವಿಸಿದೆ.

Advertisement

ಸುಂಟಿಕೊಪ್ಪದ ನಿವಾಸಿ ಮುಸ್ತಫ‌ (47) ಮೃತಪಟ್ಟವರು. ಬುಧವಾರ ಬೆಳಗ್ಗೆ ತಮ್ಮ ಇನೊವಾ ವಾಹನದಲ್ಲಿ ಪುತ್ರಿಯನ್ನು ದ್ವಿತೀಯ ಪಿಯುಸಿ ಪರೀಕ್ಷೆಗೆಂದು ಕುಶಾಲನಗರ ಕಾಲೇಜಿಗೆ ಬಿಟ್ಟು ಸುಂಟಿಕೊಪ್ಪಕ್ಕೆ ಮರಳುತ್ತಿದ್ದಾಗ ಈ ದುರ್ಘ‌ಟನೆ ಸಂಭವಿಸಿದೆ.

ಮಡಿಕೇರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಪ್ರವಾಸಿಗರಿದ್ದ ಕಾರು ಹಾಗೂ ಇನೊವಾ ನಡುವೆ ಢಿಕ್ಕಿಯಾಗಿದೆ. ಪ್ರವಾಸಿಗರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಹೈಸ್ಕೂಲ್ ವಿದ್ಯಾರ್ಥಿನಿಯರ ಗ್ಯಾಂಗ್ ವಾರ್ !!..: ವಿಡಿಯೋ ವೈರಲ್

ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next