Advertisement

ಕುದ್ಕೋಳಿ: ಗೋ ಕಳ್ಳರಿಂದ ಎಸ್‌ಐ ಮೇಲೆ ದಾಳಿ; ಪರಾರಿಯಾದ ಕಳ್ಳರು, ವಾಹನ, ಜಾನುವಾರು ವಶಕ್ಕೆ

08:39 PM May 15, 2022 | Team Udayavani |

ಪುಂಜಾಲಕಟ್ಟೆ :ಅಕ್ರಮ ಗೋ ಸಾಗಾಟದ ವಾಹನವನ್ನು ನಿಲ್ಲಿಸಲೆತ್ನಿಸಿದ ಎಸ್‌ಐ ಅವರು ಗೋ ಸಾಗಾಟದ ವಾಹನ ತಾಗಿ ಗಾಯಗೊಂಡ ಘಟನೆ ರವಿವಾರ ಮುಂಜಾನೆ ಬಂಟ್ವಾಳ ತಾಲೂಕಿನ ಕುದ್ಕೋಳಿ ಎಂಬಲ್ಲಿ ಸಂಭವಿಸಿದೆ.

Advertisement

ಘಟನೆಯಲ್ಲಿ ಪುಂಜಾಲಕಟ್ಟೆ ಠಾಣಾ ಎಸ್‌ಐ ಸುತೇಶ್‌ ಅವರು ಗಾಯಗೊಂಡಿದ್ದು, ಗೋ ಕಳ್ಳರು ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಗೋ ಸಾಗಾಟದ ಮಿನಿ ಲಾರಿಯಲ್ಲಿದ್ದ ಮೂರು ದನಗಳನ್ನು ರಕ್ಷಿಸಲಾಗಿದೆ.

ವಾಮದಪದವು-ಕುದ್ಕೋಳಿ ರಸ್ತೆಯಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಆಗಮಿಸಿದ ಮಿನಿಲಾರಿಯನ್ನು ತಪಾಸಣೆಗೈಯ್ಯಲು ಎಸ್‌ ಐ ಅವರು ನಿಲ್ಲಿಸಲು ಸೂಚಿಸಿದಾಗ ನಿಲ್ಲಿಸದೇ ಅವರ ಮೇಲೆ ನುಗ್ಗಿಸಿ ಮುಂದೆ ಸಾಗಿದ ಪರಿಣಾಮ ಎಸ್‌ ಐ ಅವರ ಕೈಗೆ ಗಾಯವಾಗಿದೆ. ಬಳಿಕ ಪೊಲೀಸರು ಬೆನ್ನತ್ತಿದಾಗ ಕಳ್ಳರು ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ.

ವಾಹನದಲ್ಲಿದ್ದ ಮೊಬೈಲ್‌ಗ‌ಳು, ವಾಹನ ಮತ್ತಿತರ ಸೊತ್ತಿನ ಮೌಲ್ಯ ಆರು ಲಕ್ಷದ ನಲುವತ್ತು ಸಾವಿರ ರೂಪಾಯಿಗಳೆಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next