Advertisement

ಉಡುಪಿ: ಕುಸಿದು ಬಿದ್ದು ಯಾತ್ರಾರ್ಥಿ ಸಾವು

11:40 PM May 08, 2022 | Team Udayavani |

ಉಡುಪಿ: ಶ್ರೀಕೃಷ್ಣ ದೇವರ ದರ್ಶನ ಪಡೆಯಲು ಸರದಿ ಸಾಲಿನಲ್ಲಿ ಸಾಗುತ್ತಿದ್ದ ಭಕ್ತರೊಬ್ಬರು ಅಸ್ವಸ್ಥಗೊಂಡು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ರವಿವಾರ ನಡೆದಿದೆ.

Advertisement

ಬೆಂಗಳೂರಿನ ಮೋಹನ್‌ (70) ಮೃತ ಯಾತ್ರಾರ್ಥಿ. ಕುಸಿದು ಬಿದ್ದಿದ್ದ ಅವರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಶ್ರೀಕೃಷ್ಣ ಮಠದ ರಕ್ಷಣ ಸಿಬಂದಿ ಸಹಕಾರದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಹೊಟ್ಟೆಯಲ್ಲಿ ಗೆಡ್ಡೆ; ಮಹಿಳೆ ಸಾವು
ಕಾರ್ಕಳ: ಹೊಟ್ಟೆಯಲ್ಲಿ ಗೆಡ್ಡೆ ಬೆಳೆದು ಆಸ್ಪತ್ರೆಗೆ ದಾಖಲಾಗಿದ್ದ ಮಿಯ್ನಾರಿನ ಶಾಲಿನಿ ಶೆಟ್ಟಿ (43) ಅವರು ಚಿಕಿತ್ಸೆ ಫ‌ಲಿಸದೆ ಮೇ 6ರಂದು ಮೃತಪಟ್ಟಿದ್ದಾರೆ.

ಶಾಲಿನಿ ಅವರ ಹೊಟ್ಟೆಯಲ್ಲಿ ಗೆಡ್ಡೆ ಮುಂಬಯಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಾಯಿಲೆ ಗುಣಮುಖವಾಗದೇ ಇದ್ದಾಗ ಮುಂಬಯಿಯಿಂದ ಊರಿಗೆ ವಾಪಸು ಬಂದು ಕಾರ್ಕಳ ಖಾಸಗಿ ನರ್ಸಿಂಗ್‌ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಮೇ 6ರಂದು ಚಿಕಿತ್ಸೆ ಪಡೆದು ಹೊರ ಬರುವ ವೇಳೆ ಎದೆನೋವು ಕಾಣಿಸಿಕೊಂಡು ಉಸಿರಾಟದ ತೊಂದರೆ ಉಂಟಾಗಿದ್ದು ವೈದ್ಯರು ತತ್‌ಕ್ಷಣ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ನೋಡಿಕೊಳ್ಳುತ್ತಿದ್ದ ಮಲ್ಲಿಕಾ ಮುಂಬಯಿ ಯಲ್ಲಿರುವ ಮೃತರ ಪತಿ ಅಶೋಕ ತೌಡ ಶೆಟ್ಟಿ ಅವರ ಗಮನಕ್ಕೆ ತಂದಿದ್ದರು ಎನ್ನಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next