Advertisement

ಕೊಲ್ಲೂರು: ಕುಖ್ಯಾತ ದರೋಡೆಕೋರನ ಬಂಧನ

09:24 PM May 10, 2022 | Team Udayavani |

ಕೊಲ್ಲೂರು: ಬೈಂದೂರು ಹಾಗೂ ಕೋಟ ಪೊಲೀಸ್‌ ಠಾಣಾ ವ್ಯಾಪ್ತಿಯ ಅನೇಕ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತ ದರೋಡೆಕೋರ ವಿಜಯ ಪೂಜಾರಿಯನ್ನು ಬೈಂದೂರು ಸರ್ಕಲ್‌ ಇನ್‌ಸ್ಪೆಕ್ಟರ್‌ ಸಂತೋಷ ಕಾಯ್ಕಿಣಿ ನೇತೃತ್ವದ ಅಪರಾಧ ಪತ್ತೆ ದಳದ ತಂಡ ಮುಂಬಯಿಯಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

Advertisement

ಮೇ 19ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈತನಿಂದ 24.4 ಗ್ರಾಂ ತೂಕದ ಒಂದು ಚಿನ್ನದ ಸರ 38.6 ಗ್ರಾಂ ತೂಕದ ಕರಿಮಣಿ ಇರುವ ಚಿನ್ನದ ಮಾಂಗಲ್ಯ ಸರ, ಮೋಟಾರ್‌ ಸೆ„ಕಲ್‌, ಮೊಬೈಲ್‌ ಸಹಿತ 3,25,500 ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನ ಪಡಿಸಲಾಗಿದೆ.

ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ವಿಷ್ಣುವರ್ಧನ್‌ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್‌ ಎಸ್‌.ಟಿ. ಸಿದ್ಧಲಿಂಗಪ್ಪ ಹಾಗೂ ಶ್ರೀಕಾಂತ್‌ ಕೆ. ಪೊಲೀಸ್‌ ಉಪಾ ಧೀಕ್ಷಕರ ಕುಂದಾಪುರ ವಿಭಾಗದ‌ವರ ಸೂಚನೆಯಂತೆ ಸಂತೋಷ ಕಾಯ್ಕಿಣಿ, ವಿನಯ ಎಂ. ಗೊಲ್ಲಹಳ್ಳಿ, ತನಿಖಾ ಪಿಎಸ್‌ಐ ,ಬೈಂದೂರು ಪೊಲೀಸ್‌ ಠಾಣೆ ಹಾಗೂ ಅಪರಾಧ ವಿಭಾಗದ ಸಿಬಂದಿ ಮೋಹನ ಪೂಜಾರಿ, ಶ್ರೀಧರ, ಪ್ರಿನ್ಸ್‌ ಕೆ.ಜೆ., ರಿತೇಶ್‌, ಕೃಷ್ಣ ದೇವಾಡಿಗ, ಅಣ್ಣಪ್ಪ ಪೂಜಾರಿ, ಚಾಲಕ ಚಂದ್ರ ಪೂಜಾರಿ, ಕೋಟ ಠಾಣೆಯ ರಾಘವೇಂದ್ರ ಶೆಟ್ಟಿ, ಆರ್‌.ಡಿ. ಸೆಲ್‌ ವಿಭಾಗದ ಶಿವಾನಂದ, ದಿನೇಶ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next