Advertisement

ಕಾರ್ಕಳ: ಅಂಗಡಿಯಲ್ಲಿ ಕಳ್ಳತನ; ಲಕ್ಷಾಂತರ ರೂ. ಹಣ ದೋಚಿ ಪರಾರಿಯಾದ ಖದೀಮರು..!

05:24 PM Jun 04, 2022 | Team Udayavani |

ಕಾರ್ಕಳ: ಹಾರ್ಡ್‌ವೇರ್‌ ಅಂಗಡಿಯ ಕೆಲಸಗಾರನ ಗಮನ ಬೇರೆಡೆ ಸೆಳೆದು ಹೊರಗೆ ಕಳುಹಿಸಿ ಅಂಗಡಿಯ ಡ್ರಾವರ್‌ ಒಡೆದು ಸುಮಾರು 1.45 ಲಕ್ಷ ರೂ. ಅನ್ನು ಕಳ್ಳರು ಕದ್ದೊಯ್ದ ಘಟನೆ ಜೂ. 2ರಂದು ಕಾರ್ಕಳ ಕಸಬಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಡಾ| ಟಿಎಂಎ ಪೈ ಆಸ್ಪತ್ರೆಯ ಮುಂಭಾಗದ ಮಂಜುಶ್ರೀ ಕಟ್ಟಡದಲ್ಲಿ ಧ್ವನಿ ಎಂಟರ್‌ಪ್ರೈಸಸ್‌ ಎಂಬ ಹಾರ್ಡ್‌ವೇರ್‌ ಅನ್ನು ಕೆ. ದೀಪಕ್‌ ಭಟ್‌ ಅವರು ನಡೆಸುತ್ತಿದ್ದು, ಅಂಗಡಿಯಲ್ಲಿ ಕೆಲಸದವರನ್ನು ಬಿಟ್ಟು ಅವರು ಮಂಗಳೂರಿಗೆ ಹೋಗಿದ್ದರು.

ಇಬ್ಬರು ವ್ಯಕ್ತಿಗಳು ಅಂಗಡಿಗೆ ಬಂದು 4 ಚೀಲ ಸಿಮೆಂಟ್‌ ಬೇಕಾಗಿದ್ದು ಅಂಗಡಿಯ ಪಕ್ಕದಲ್ಲಿರುವ ಇಂಚರ ಎಂಬ ಮನೆಗೆ ಹಾಕುವಂತೆ ತಿಳಿಸಿದ್ದರು. ಅದರಂತೆ ಸಿಮೆಂಟ್‌ ಚೀಲವನ್ನು ಮನೆಗೆ ಹಾಕಿ ಬಂದಾಗ ಅಂಗಡಿಯಲ್ಲಿದ್ದ ಇಬ್ಬರು ವ್ಯಕ್ತಿಗಳು ಇರಲಿಲ್ಲ.

ಅಂಗಡಿಯದ್ದ ಕೆಲಸದವರಾದ ಅಶೋಕ ಅವರು ಮಾಲಕರಿಗೆ ಕರೆ ಮಾಡಿ ಬರುವಂತೆ ತಿಳಿಸಿದ್ದು, ಅಶೋಕರವರು ಮಂಗಳೂರಿನಿಂದ ಅಂಗಡಿಗೆ ಬಂದು ವಿಚಾರಿಸಿದಾಗ ಅಂಗಡಿಯ ಡ್ರಾವರ್‌ ಒಡೆದ ಹಣ ಲಪಟಾಯಿಸಿರುವುದು ಗಮನಕ್ಕೆ ಬಂದಿದೆ.

ಕಳ್ಳತನ ಮಾಡುವ ಉದ್ದೇಶದಿಂದ ಅಶೋಕ ಅವರನ್ನು ಅಂಗಡಿಯಿಂದ ಹೊರಗೆ ಕಳುಹಿಸಿ, ಡ್ರಾವರ್‌ಒಡೆದು ಕಳ್ಳರು ಅದರೊಳಗಿದ್ದ ನಗದು 1.45 ಲಕ್ಷ ರೂ ಅನ್ನು ಕಳವು ಮಾಡಿದ್ದಾರೆ. ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next