Advertisement

ಕಡೆಗೋಳಿ: ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಯುವಕನ ಮೇಲೆ ಹಲ್ಲೆ, ಜೀವ ಬೆದರಿಕೆ

05:55 PM May 18, 2022 | Team Udayavani |

ಬಂಟ್ವಾಳ: ಫರಂಗಿಪೇಟೆ ಸಮೀಪದ ಕಡೆಗೋಳಿ ದ್ವಾರದ ಬಳಿ ಯುವಕನೋರ್ವ ಬೈಕನ್ನು ನಿಲ್ಲಿಸಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಮೂವರು ಯುವಕರು ಆಗಮಿಸಿ ಜೀವ ಬೆದರಿಕೆ ಒಡ್ಡಿ ಹಲ್ಲೆ ನಡೆಸಿದ ಘಟನೆ ಮೇ 17ರಂದು ನಡೆದಿದೆ.

Advertisement

ತುಂಬೆ ಗ್ರಾಮದ ರೊಟ್ಟಿಗುಡ್ಡೆ ನಿವಾಸಿ ನಫಿಲ್‌(18) ಹಲ್ಲೆಗೊಳಗಾದ ಯುವಕ. ಅವರು ಮೇ 17ರಂದು ರಾತ್ರಿ 11ರ ಸುಮಾರಿಗೆ ಕೂಲಿ ಕೆಲಸ ಮುಗಿಸಿಕೊಂಡು ಫರಂಗಿಪೇಟೆಯಿಂದ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಮೊಬೈಲ್‌ಗೆ ಕರೆ ಬಂದ ಹಿನ್ನೆಲೆಯಲ್ಲಿ ಕಡೆಗೋಳಿ ದ್ವಾರದ ಬಳಿ ಬೈಕನ್ನು ನಿಲ್ಲಿಸಿ ಮೊಬೈಲ್‌ ಮಾತನಾಡುತ್ತಿದ್ದರು.

ಆ ವೇಳೆ ಕಡೆಗೋಳಿ ಪರಿಸರದ ಮೂವರು ಯುವಕರು ಬಂದು ಮೊಬೈಲ್‌ ಎಳೆಯಲು ನೋಡಿ ಬೈದರಿಕೆ ಒಡ್ಡಿ ಪಕ್ಕದ ಅಂಗಡಿಯ ಬಳಿಗೆ ಕರೆದುಕೊಂಡು ಹೋಗಿ ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ಬೈದು ಮರದ ತುಂಡಿನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಯುವಕರು ತುಳುವಿನಲ್ಲಿ ಬೈದಿದ್ದು, ಮುಂದೆ ನೋಡಿದರೆ ಅವರನ್ನು ಗುರುತಿಸುತ್ತೇನೆ ಎಂದು ನಫಿಲ್‌ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next