Advertisement

ಕಾರಿನಿಂದ ಢಿಕ್ಕಿ ಹೊಡೆಸಿ 1.75 ಲಕ್ಷ ದೋಚಿ ಪರಾರಿ

11:37 AM Jan 11, 2021 | Team Udayavani |

ಹನೂರು: ವ್ಯಾಪಾರದ ಹಣವನ್ನು ತರುತ್ತಿದ್ದ ವ್ಯಕ್ತಿಗೆ ಕಾರಿನಿಂದ ಢಿಕ್ಕಿ ಹೊಡೆಸಿ, ಹಣ ದೋಚಿರುವ ಘಟನೆ ಪಟ್ಟಣದ ಹೊರ ವಲಯದ ಅರಣ್ಯ ಇಲಾಖೆ ನರ್ಸರಿ ಸಮೀಪ ನಡೆದಿದೆ.

Advertisement

ಹನೂರು ಪಟ್ಟಣದ ನಿತಿನ್‌ ಎಂಬುವವರೇ ಹಣ ಕಳೆದುಕೊಂಡಿರುವ ವ್ಯಕ್ತಿ. ಇವರು ವೃತ್ತಿಯಲ್ಲಿ ವ್ಯಾಪಾರಸ್ಥರಾಗಿದ್ದಾರೆ. ಇವರು ಸನ್‌ಫ್ಯೂರ್‌ ಎಣ್ಣೆಯ ಏಜೆನ್ಸಿ ಪಡೆದಿದ್ದು, ತಾಲೂಕಿನ ವಿವಿಧ ಗ್ರಾಮಗಳ ಅಂಗಡಿಗಳಿಗೆ ಸರಬರಾಜು ಮಾಡುತ್ತಿದ್ದರು. ಇವರು ಎಂದಿನಂತೆ ವ್ಯಾಪಾರ ಮುಗಿಸಿ ಎಲ್ಲೇಮಾಳ, ಕೌದಳ್ಳಿ, ರಾಮಾಪುರ ಅಂಗಡಿಗಳಿಂದ ಹಣ ಸಂಗ್ರಹಣೆ ಮಾಡಿ, ದ್ವಿಚಕ್ರ ವಾಹನದಲ್ಲಿ ಆಗಮಿಸುತ್ತಿದ್ದರು.

ಈ ವೇಳೆ ಪಟ್ಟಣ- ಅಜ್ಜೀಪುರ ಮಾರ್ಗದ ಅರಣ್ಯ ಇಲಾಖೆ ನರ್ಸರಿ ಸಮೀಪ ಆಗಮಿಸುತ್ತಿದ್ದಂತೆ ಅಪರಿಚಿತ ಇಂಡಿಕಾ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನಲ್ಲಿದ್ದ 5 ಜನ ಅಪರಿಚಿತರು ವಾಹನದಿಂದ ಕೆಳಗಿಳಿದು ಅವರ ಬಳಿಯಿದ್ದ 1.75 ಲಕ್ಷ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಬಳಿಕ ನಿತಿನ್‌ ಅವರು ಹನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸುದ್ದಿ ತಿಳಿದ ತಕ್ಷಣ ಕೊಳ್ಳೇಗಾಲ ಉಪವಿಭಾಗ ಡಿವೈಎಸ್‌ಪಿ ನಾಗರಾಜು ಮತ್ತು ರಾಮಾಪುರ ಪಿಎಸ್‌ಐ ನಂಜುನಾಥ್‌ ಪ್ರಸಾದ್‌ ಹಾಗೂ ಹನೂರು ಪೊಲೀಸರು ಸ್ಥಳಕ್ಕೆ ಆಗಮಿಸಿ, ಸ್ಥಳ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next