Advertisement

ಕೊಂಪದವು: ಉಳುಮೆ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್‌ ಪಲ್ಟಿಯಾಗಿ ರೈತ ಸಾವು

01:32 AM May 29, 2022 | Team Udayavani |

ಬಜಪೆ: ಕೊಂಪದವು ಗ್ರಾಮದ ಕೃಷಿಕ ತಾರಾನಾಥ ಶೆಟ್ಟಿ (46) ಅವರು ಗದ್ದೆ ಉಳುಮೆ ಮಾಡು ತ್ತಿದ್ದ ವೇಳೆ ಟ್ರ್ಯಾಕ್ಟರ್‌ ಪಲ್ಟಿಯಾಗಿ ಸಾವನ್ನಪ್ಪಿದ ಘಟನೆ ಮೇ 27ರಂದು ಮಧ್ಯಾಹ್ನ ನಡೆದಿದೆ.

Advertisement

ತಾರಾನಾಥ ಅವರು ಪ್ರಗತಿಪರ ಕೃಷಿಕರಾಗಿದ್ದು ಪತ್ನಿ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.

ಅವರು ತಮ್ಮ ಗದ್ದೆಯಲ್ಲಿ ಉಳುಮೆ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್‌ ಪಲ್ಟಿಯಾಗಿ ಅವರ ಮೇಲೆ ಬಿದ್ದು ಅವರು ಅಡಿಯಲ್ಲಿ ಸಿಲುಕಿದ್ದರು. ಅಡಿಗೆ ಬಿದ್ದ ಅವರನ್ನು ಮೇಲೆಕ್ಕೆತ್ತಿ ಆಸ್ಪತ್ರೆಗೆ ಸಾಗಿಸುವ ವೇಳೆ ಅವರು ಮೃತಪಟ್ಟಿದ್ದಾರೆ.

ಬಜಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next