Advertisement

ಗಾಂಜಾ ಸೇವನೆ ಪ್ರಕರಣ: ಆರು ಮಂದಿ ಪೊಲೀಸರ ವಶಕ್ಕೆ

12:02 AM May 24, 2022 | Team Udayavani |

ಮಂಗಳೂರು: ಗಾಂಜಾ ಸೇವನೆ ಮಾಡಿದ್ದ ಇಬ್ಬರನ್ನು ಮಂಗಳೂರು ಪೂರ್ವ ಠಾಣಾ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ರವಿವಾರ ರಾತ್ರಿ 8.45ಕ್ಕೆ ಪೊಲೀಸರು ರೌಂಡ್ಸ್‌ ನಲ್ಲಿದ್ದಾಗ ನಗರದ ಸೈಂಟ್‌ ಆ್ಯಗ್ನೆಸ್‌-ಕದ್ರಿ ಸಾರ್ವಜನಿಕ ರಸ್ತೆಯ ಕಟ್ಟೆಯೊಂದರಲ್ಲಿ ಸಾರ್ವಜನಿಕವಾಗಿ ಸಿಗರೇಟ್‌ ಸೇದುತ್ತಿದ್ದ ಕ್ಯಾಲಿವನ್‌ ಆಗಸ್ಟಿನ್‌ ಮತ್ತು ಅರವಿಂದ್‌ ಅವರ ಬಳಿ ತೆರಳಿದಾಗ ಅವರು ತಪ್ಪಿಸಿಕೊಳ್ಳಲು ಯತ್ನಿಸಿದರು. ಅವರನ್ನು ವಶಕ್ಕೆ ಪಡೆದಾಗ ಅವರ ಮಾತುಗಳು ತೊದಲುತ್ತಿದ್ದು ಅಮಲು ಪದಾರ್ಥದ ವಾಸನೆ ಬರುತ್ತಿತ್ತು. ಅವರು ಸಿಗರೇಟ್‌ ಜತೆಗೆ ಗಾಂಜಾ ಸೇವನೆ ಮಾಡಿಕೊಂಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಅಲ್ಲದೆ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಅವರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.

ಬಂಟ್ವಾಳ: ನಾಲ್ವರ ವಿರುದ್ಧ ಪ್ರಕರಣ ದಾಖಲು
ಬಂಟ್ವಾಳ: ತಾಲೂಕಿನ ಸಜೀಪಮುನ್ನೂರು ಗ್ರಾಮದ ನಂದಾವರ ಜಂಕ್ಷನ್‌ ಹಾಗೂ ಸಜೀಪಪಡು ಗ್ರಾಮದ ಕೋಟೆಕಣಿ ಜಂಕ್ಷನ್‌ ಬಳಿ ಗಾಂಜಾ ಸೇವಿಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಪೊಲೀಸರು ಒಟ್ಟು ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾ ರೆ.

ನಂದಾವರ ಜಂಕ್ಷನ್‌ನಲ್ಲಿ ಸ್ಥಳೀಯ ನಿವಾಸಿ ಆರೋಪಿಗಳಾದ ಮೊಹಮ್ಮದ್‌ ಇಮಿ¤ಯಾಜ್‌ ಹಾಗೂ ಉಬೈದ್‌, ಕೋಟೆಕಣಿಯಲ್ಲಿ ಮಹಮ್ಮದ್‌ ಶಮೀರ್‌, ಮಹಮ್ಮದ್‌ ಅಪ್ಸಾನ್‌ ಗಾಂಜಾ ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದವರು.

ಬಂಟ್ವಾಳ ನಗರ ಠಾಣಾ ಪಿಎಸ್‌ಐ ಅವಿನಾಶ್‌ ಗೌಡ ಹಾಗೂ ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್‌ಐ ಹರೀಶ್‌ ಎಂ.ಆರ್‌. ಗಸ್ತು ತಿರುಗುತ್ತಿದ್ದ ವೇಳೆ ಗಾಂಜಾ ಸೇವನೆ ಮಾಡಿ ತೊಂದರೆ ಕೊಡುತ್ತಿದ್ದ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದರು. ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next