Advertisement

ರೌಡಿಶೀಟರ್‌ ಇಲ್ಯಾಸ್‌ ಹತ್ಯೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

10:54 PM May 04, 2022 | Team Udayavani |

ಉಳ್ಳಾಲ: ರೌಡಿಶೀಟರ್‌ ಇಲ್ಯಾಸ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉಳ್ಳಾಲ ಕಡಪ್ಪುರ ನಿವಾಸಿ ಸಮೀರ್‌ (28)ನನ್ನು ಉಳ್ಳಾಲ ಪೊಲೀಸರ ತಂಡ ಮೇ 4ರಂದು ಬಂಧಿಸಿದೆ.

Advertisement

ಹಲವು ಪ್ರಕರಣಗಳ ಆರೋಪಿಯಾಗಿದ್ದ ರೌಡಿಶೀಟರ್‌ ಇಲ್ಯಾಸ್‌ನನ್ನು 2018ರ ಜ. 13 ರಂದು ಜೆಪ್ಪು ಕುಡಾ³ಡಿಯಲ್ಲಿ ಆತನ ಫ್ಲಾಟ್‌ನಲ್ಲೇ ಹತ್ಯೆ ನಡೆಸಲಾಗಿತ್ತು. ಪ್ರಕರಣ ಸಂಬಂಧ ಮೂವರು ಅರೋಪಿಗಳಾದ ದಾವುದ್‌, ರಿಯಾಝ್, ನಾಸಿರ್‌ನನ್ನು ಅಂದೇ ಬಂಧಿಸಿದ್ದು, ಸಮೀರ್‌ ತಲೆಮರೆಸಿಕೊಂಡಿದ್ದನು.

ಕಳೆದ ಎರಡು ತಿಂಗಳ ಹಿಂದೆ ಉಳ್ಳಾಲ ಉರೂಸ್‌ ಸಂದರ್ಭ ಆತನನ್ನು ಉಳ್ಳಾಲ ಪೊಲೀಸರು ಹಿಡಿಯಲು ಯತ್ನಿಸಿದ್ದರೂ ಕಾರ್ಯಾಚರಣೆ ಸಫಲವಾಗಿರಲಿಲ್ಲ.

ಇದೀಗ ಆರೋಪಿ ಪಂಪ್‌ವೆಲ್‌ ಮುಖೇನ ಬೆಂಗಳೂರಿಗೆ ತೆರಳುತ್ತಿರುವ ಖಚಿತ ಮಾಹಿತಿ ಪಡೆದ ಉಳ್ಳಾಲ ಠಾಣಾಧಿಕಾರಿ ಸಂದೀಪ್‌ ಅವರ ನಿರ್ದೇಶನದಂತೆ ಎಸ್‌ಐ ಪ್ರದೀಪ್‌ ಹಾಗೂ ಸಿಬಂದಿ ರಂಜಿತ್‌, ಚಿದಾನಂದ್‌ ಹಾಗೂ ಸತೀಶ್‌ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next