Advertisement

ಅಪಹರಣ ನಾಟಕವಾಡಿ ತಲೆಮರೆಸಿದ್ದ ವ್ಯಕ್ತಿ ಸೆರೆ: ಅರಕೆರೆ ಪೊಲೀಸರಿಂದ 30 ದಿನಗಳ ಕಾರ್ಯಾಚರಣೆ

11:06 PM Sep 14, 2022 | Team Udayavani |

ಶ್ರೀರಂಗಪಟ್ಟಣ: ಪ್ರಿಯತಮೆಗೆ ನೀಡಿದ್ದ ಸಾಲವನ್ನು ಮರಳಿ ಪಡೆಯಲು ಅಪಹರಣ ನಾಟಕವಾಡಿ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ಪತ್ತೆಹಚ್ಚಿ, ಪ್ರಕರಣಕ್ಕೆ ಇತಿಶ್ರೀ ಹಾಕಿದ್ದಾರೆ.

Advertisement

ಪ್ರಕರಣದ ವಿವರ: ತಾಲೂಕಿನ ಚೊಟ್ಟನಹಳ್ಳಿ ಗ್ರಾಮದ ಮನು (34) ಅದೇ ಗ್ರಾಮದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಆಕೆಗೆ 7 ಲಕ್ಷ ರೂ. ಸಾಲ ನೀಡಿ, ಭದ್ರತೆಗಾಗಿ ಚೆಕ್‌ ಪಡೆದಿದ್ದ. ಇವರ ನಡುವೆ ಸಂಬಂಧ ಹದಗೆಟ್ಟ ಬಳಿಕ ಸಾಲ ಮರು ಪಾವತಿಸುವಂತೆ ಒತ್ತಡ ಹೇಳಿದ್ದ. ಆದರೂ ಮಹಿಳೆ ಹಣವನ್ನು ವಾಪಸ್‌ ನೀಡಿರಲಿಲ್ಲ. ಬದಲಿಗೆ ಆಕೆಯ ಕಡೆಯವರು ಚೆಕ್‌ ವಾಪಸ್‌ ಕೊಡುವಂತೆ ಮನುವಿಗೆ ಬೆದರಿಕೆ ಹಾಕಿದ್ದರು.
ಈ ಕರೆಯನ್ನು ರೆಕಾರ್ಡ್‌ ಮಾಡಿಕೊಂಡು ಸ್ನೇಹಿತನಿಗೆ ಕಳುಹಿಸಿದ ಮನು, ತನ್ನನ್ನು ಅಪಹರಣ ಮಾಡಿದ್ದಾರೆ ಎಂದು ಹೇಳಿ ಆ. 12ರಿಂದ ನಾಪತ್ತೆಯಾಗಿದ್ದ. ಪೊಲೀಸರು ಮಹಿಳೆ ಮತ್ತು ಕೆಲವರನ್ನು ಬಂಧಿಸಿ, ತನಿಖೆ ನಡೆಸಿದರೂ ಅಪಹರಣದ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ತನಿಖೆ ಮುಂದುವರಿಸಿದಾಗ ಮನು ಗೋವಾದಲ್ಲಿರುವುದು ತಿಳಿದು ಬಂತು.

ಆತ್ಮಹತ್ಯೆ ನಾಟಕ: ಪೊಲೀಸರು ಗೋವಾಕ್ಕೆ ಹೋಗುವ ವಿಷಯ ತಿಳಿದು ಅಲ್ಲಿಂದ ಊರಿಗೆ ಬಂದಿದ್ದ ಮನು ನಾಲೆ ಬಳಿ ವಿಷ ಕುಡಿದ ಆಡಿಯೋವನ್ನು ಸ್ನೇಹಿತನಿಗೆ ಕಳುಹಿಸಿ ಮತ್ತೆ ನಾಪತ್ತೆಯಾಗಿದ್ದ. ಈತನಿಗಾಗಿ ನಾಲೆ ಬಳಿ ಸ್ನೇಹಿತರು ಮತ್ತು ಸಂಬಂಧಿಕರ ಹುಟುಕಾಡಿದರೂ ಯಾವುದೇ ಮಾಹಿತಿ ಸಿಗಲಿಲ್ಲ. ಈತ ಸತ್ತಿರುವ ಸಾಧ್ಯತೆ ಕಡಿಮೆ ಎಂದು ಪೊಲೀಸರು ತನಿಖೆ ಮುಂದುವರಿಸಿದರು.

ಬೆಂಗಳೂರಿನಲ್ಲಿ ಪತ್ತೆ: ಕೆಲವು ದಿನಗಳ ಬಳಿಕ ಈತ ಬೆಂಗಳೂರಿನ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿರುವುದನ್ನು ಪತ್ತೆ ಹಚ್ಚಿರುವ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next