Advertisement

ಚಿನ್ನಾಭರಣ ಕಳವು: ಕೆಲಸದಾಕೆಯ ವಿರುದ್ಧ ದೂರು ದಾಖಲು

08:37 PM Sep 06, 2022 | Team Udayavani |

ಕುಂದಾಪುರ: ಕೆಲಸ ಮಾಡುತ್ತಿದ್ದ ಮನೆ ಯಿಂದ ಚಿನ್ನಾಭರಣ, ಎಟಿಎಂ ಕಾರ್ಡ್‌ ಕದ್ದಿದ್ದಾಳೆ ಎಂದು ಕೆಲಸದಾಕೆ ಮೇಲೆ ದೂರು ದಾಖಲಾಗಿದೆ.

Advertisement

ಹೆಸ್ಕಾತ್ತೂರಿನ ಹಾರ್ಯಾಡಿ ಕೆರೆಮನೆಯ ನವೀನ್‌ ಶೆಟ್ಟಿ ಅವರ ದೊಡ್ಡಮ್ಮ ಜಲಜಮ್ಮ ಶೆಡ್ತಿಯ ಮೊಮ್ಮಕ್ಕಳು ವಿದೇಶದಲ್ಲಿ ನೆಲೆಸಿರುವುದರಿಂದ ಜಲಜಮ್ಮ ಶೆಡ್ತಿ ಅವರು ಒಬ್ಬಂಟಿಯಾಗಿ ವಾಸವಿದ್ದಾರೆ. ನವೀನ್‌ ಶೆಟ್ಟಿ ಮನೆಯವರು ಜಲಜಮ್ಮ ಮನೆಗೆ ಆಗಾಗ ಹೋಗಿ ಬರುತ್ತಿರುತ್ತಾರೆ. ಮನೆ ಕೆಲಸಕ್ಕೆ ಮಂಗಳೂರಿನ ಏಜೆನ್ಸಿ ಮೂಲಕ ಮಹಿಳೆಯೊಬ್ಬರು ಸೇರಿದ್ದು, ಸಂಸಾರದ ತಾಪತ್ರಯ ಎಂದು ಆ. 1ರಂದು ಕೆಲಸ ಬಿಟ್ಟಿದ್ದರು. ಅದೇ ಏಜೆನ್ಸಿ ಸುಶ್ಮಿತಾ ಎಂಬಾಕೆಯನ್ನು ಕಳಿಸಿತ್ತು.

1 ವಾರ ಕೆಲಸ ಮಾಡಿ ಆಕೆ ಮರಳಿ ಮಂಗಳೂರಿಗೆ ಹೋಗಿದ್ದಾಳೆ. ಈ ಹಿಂದೆ ಕೆಲಸ ಮಾಡಿಕೊಂಡಿದ್ದ ಮಹಿಳೆ ಮರಳಿ ಬಂದಿದ್ದು, ನವೀನ್‌ ಮನೆಯಲ್ಲಿನ ಗೌರಿ ಹಬ್ಬಕ್ಕೆ ಜಲಜಮ್ಮರ ಚಿನ್ನ ದೇವರ ಪೂಜೆಗೆ ಇಡಲು ನೋಡಿದಾಗ ಕಪಾಟಿನಲ್ಲಿ ಇರಿಸಿದ್ದ 2 ಪವನ್‌ ತೂಕದ 1.1 ಲಕ್ಷ ರೂ. ಮೌಲ್ಯದ ಚಿನ್ನದ ಬಳೆ ಇರಲಿಲ್ಲ. ಎಟಿಎಂ ಕಾರ್ಡ್‌ ಕೂಡ ಇರಲಿಲ್ಲ.

ಕೇವಲ 1 ವಾರದ ಮಟ್ಟಿಗೆ ಕೆಲಸಕ್ಕೆ ಬಂದಿದ್ದ ಸುಶ್ಮಿತಾ, ಎಷ್ಟೇ ಪೋನ್‌ ಮಾಡಿದರೂ ಕರೆ ಸ್ವೀಕರಿಸಲಿಲ್ಲ. ಏಜೆನ್ಸಿಯವರೂ ಸರಿಯಾಗಿ ಸ್ಪಂದಿಸಲಿಲ್ಲ. ಹಾಗಾಗಿ ಈಗ ಸುಶ್ಮಿತಾ ಮೇಲೆ ಕಳ್ಳತನದ ಅನುಮಾನದಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next