Advertisement

ಜಾನುವಾರು ಅಕ್ರಮ ಸಾಗಾಟ: ವಾಹನ ಸಹಿತ ಆರೋಪಿ ವಶಕ್ಕೆ

12:19 AM Aug 10, 2022 | Team Udayavani |

ಮೂಡುಬಿದಿರೆ: ವಿದ್ಯಾಗಿರಿ ಜಂಕ್ಷನ್‌ ಬಳಿ ಮಂಗಳವಾರ ಮಧ್ಯಾಹ್ನ ಎರಡು ಗಂಟೆಯ ವೇಳೆಗೆ ಪಿಕಪ್‌ ವಾಹನವೊಂದನ್ನು ಮೂಡುಬಿದಿರೆ ಪೊಲೀಸ್‌ ಠಾಣೆಯ ಎಸ್‌ಐ ಸಿದ್ದಪ್ಪ, ಎಎಸ್‌ಐ ಕುಮಾರ್‌ ಮತ್ತು ಸಿಬಂದಿ ತಡೆದು ಶೋಧಿಸಿದಾಗ ಯಾವುದೇ ಪರವಾನಿಗೆ, ದಾಖಲೆಗಳಿಲ್ಲದೆ ಅಕ್ರಮವಾಗಿ 3 ದನಗಳನ್ನು ಸಾಗಿಸಲಾಗುತ್ತಿರುವುದು ಕಂಡು ಬಂದಿದೆ.

Advertisement

ಆರೋಪಿ, ವಾಹನ ಚಾಲಕ ಮೂಡುಬಿದಿರೆ ಲಾಡಿಯ ಸಂದೇಶ ಶೆಟ್ಟಿಯನ್ನು ಪೊಲೀಸರು ವಿಚಾರಿಸಿದಾಗ ಜಾನುವಾರು ಸಾಗಾಟದ ಕುರಿತಾದ ಯಾವುದೇ ಪರವಾನಿಗೆ ಆರೋಪಿ ಬಳಿ ಇರಲಿಲ್ಲ. ಅಲಂಗಾರ್‌ನ ನವೀನ ಅವರ ಫಾರ್ಮ್ನಿಂದ ಕಡಿಮೆ ದರದಲ್ಲಿ ಖರೀದಿಸಿ ಮಾಂಸ ಮಾಡುವ ಉದ್ದೇಶದಿಂದ ಪರಭಾರೆ ಮಾಡಲು ಕೈಕಂಬದತ್ತ ಸಾಗಿಸಲಾಗುತ್ತಿರುವುದನ್ನು ಪೊಲೀಸರು ಖಚಿತ ಪಡಿಸಿ ಕೊಂಡಿದ್ದಾರೆ.

ಜಾನುವಾರುಗಳು, ವಾಹನ ಮತ್ತು ಸಾಗಾಟದಲ್ಲಿ ತೊಡಗಿಸಿಕೊಂಡಿದ್ದ ಆರೋಪಿಯನ್ನು ವಶಕ್ಕೆ ತೆಗೆದು ಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next