Advertisement

ಉಡುಪಿ: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವು

12:04 AM Aug 09, 2022 | Team Udayavani |

ಉಡುಪಿ: ಮಲ್ಪೆಯಲ್ಲಿ ಮೀನುಗಾರಿಕೆ ವೃತ್ತಿ ಮಾಡುತ್ತಿದ್ದ ಬ್ರಹ್ಮಾವರದ ಸುರೇಶ್‌(43) ಅವರು ಇಂದ್ರಾಳಿಯ ರೈಲ್ವೇ ಹಳಿಯ ಬಳಿ ಮೃತಪಟ್ಟಿದ್ದಾರೆ.

Advertisement

ಆ. 4ರಂದು ಕೆಲಸಕ್ಕೆಂದು ಮಲ್ಪೆಗೆ ಹೋಗಿದ್ದು, ಆ. 7ರಂದು ಮನೆಗೆ ಕರೆ ಮಾಡಿ ಮಾತನಾಡಿದ್ದರು. ಆ. 8ರಂದು ಬೆಳಗ್ಗೆ ಸುಮಾರು 8 ಗಂಟೆ ಹೊತ್ತಿಗೆ ಸಾವನ್ನಪ್ಪಿದ ವಿಚಾರ ತಿಳಿದುಬಂದಿದೆ. ಇಂದ್ರಾಳಿ ರೈಲು ಹಳಿಯ ಬಳಿ ಗಾಯಗೊಂಡು ಬಿದ್ದಿರುವ ಬಗ್ಗೆ ರೈಲ್ವೇ ಅಧಿಕಾರಿಗಳಿಂದ ಮಾಹಿತಿ ತಿಳಿದು ಪತ್ನಿ ಹಾಗೂ ಸಂಬಂಧಿಕರು ಸ್ಥಳಕ್ಕೆ ಹೋಗಿ ನೋಡಿದಾಗ ಸುರೇಶ ಅವರ ಹಣೆ, ತಲೆ, ಕಾಲುಗಳಿಗೆ ತೀವ್ರವಾದ ಗಾಯವಾಗಿ ಮೃತಪಟ್ಟಿದ್ದರು.

ಯಾವುದೋ ಕಾರಣಕ್ಕೆ ಇಂದ್ರಾಳಿಗೆ ಹೋಗಿದ್ದ ಸುರೇಶ್‌ ಅವರು ಮಂಗಳೂರು-ಕುಂದಾಪುರ ರೈಲು ಹಳಿಯಲ್ಲಿ ನಡೆದುಕೊಂಡು ಬಾಕೂìರು ಕಡೆಗೆ ಬರುತ್ತಿರುವಾಗ ಯಾವುದೋ ರೈಲು ಢಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next