Advertisement

ಪುತ್ತೂರು: ಕೆರೆಗೆ ಬಿದ್ದು ರಬ್ಬರ್‌ ಟ್ಯಾಪರ್‌ ಸಾವು

11:45 PM Aug 07, 2022 | Team Udayavani |

ಪುತ್ತೂರು: ದರ್ಬೆತ್ತಡ್ಕದಲ್ಲಿ ತೋಟದ ಕೆರೆಗೆ ರಬ್ಬರ್‌ ಟ್ಯಾಪಿಂಗ್‌ ಕೆಲಸ ನಿರ್ವಹಿಸುತ್ತಿರುವ ಶನೂಶ್‌ (23) ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಆ. 7ರ ರಾತ್ರಿ ಸಂಭವಿಸಿದೆ.

Advertisement

ಕೇರಳ ಮೂಲದ ಶನೂಶ್‌ ದರ್ಬೆತ್ತಡ್ಕದಲ್ಲಿ ಬಾಡಿಗೆ ಮನೆಯೊಂaದರಲ್ಲಿದ್ದರು. ಅವರು ಬಾಲಕೃಷ್ಣ ಆಚಾರ್ಯ ಅವರ ತೋಟದ ಕೆರೆಯಲ್ಲಿ ಸ್ನಾನಕ್ಕೆ ಇಳಿದಾಗ ಘಟನೆ ಸಂಭವಿಸಿದೆ.

ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಟ್ಲ: ಚರಂಡಿಗೆ ಬಿದ್ದು ವ್ಯಕ್ತಿ ಸಾವು
ವಿಟ್ಲ: ರವಿವಾರ ಬೆಳಗ್ಗೆ ವಿಟ್ಲ ಪೇಟೆ ರಸ್ತೆ ಬದಿಯ ಚರಂಡಿಗೆ ಬಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.

ವಿಟ್ಲಕಸಬಾ ಗ್ರಾಮದ ಚಂದಳಿಕೆ ನಿವಾಸಿ ಪದ್ಮನಾಭ ನಾಯ್ಕ (55) ಮೃತಪಟ್ಟವರು. ವಿಟ್ಲ ಕಾಸರಗೋಡು ಮುಖ್ಯ ರಸ್ತೆಯ ಚರಂಡಿಯಲ್ಲಿ ತಲೆ ಚರಂಡಿಯೊಳಗಡೆ ಮತ್ತು ದೇಹದ ಭಾಗ ಹೊರಗಡೆ ಬಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.

Advertisement

ಹಿಂದಿರುಗಿ ಬರಲೇ ಇಲ್ಲ
ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಪದ್ಮನಾಭ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಶನಿವಾರ ಉಕ್ಕುಡದ ಲ್ಲಿರುವ ಬಂಧುಗಳ ಮನೆಗೆ ಹೋಗಿ ಬರುವುದಾಗಿ ತೆರಳಿದ್ದರು. ಆದರೆ ಹಿಂದಿರುಗಿ ಬಂದಿರಲಿಲ್ಲ. ಪುತ್ರ ಉದಯ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next