Advertisement

ಕಾಪು ಪ್ರಖಂಡ ಬಜರಂಗ ದಳ ಸಂಚಾಲಕನ ಹತ್ಯೆಗೆ ಯತ್ನ? ಸಂಘಟನೆಯಿಂದ ಕಾಪು ಪೊಲೀಸ್‌ ಠಾಣೆಗೆ ದೂರು

12:27 AM Aug 01, 2022 | Team Udayavani |

ಕಾಪು: ಕಾಪು ಪ್ರಖಂಡ ಬಜರಂಗ ದಳ ಸಂಚಾಲಕ ಹೇರೂರು ಕಲ್ಲುಗುಡ್ಡೆ ನಿವಾಸಿ ಸುಧೀರ್‌ ಸೋನು ಅವರ ಮನೆಗೆ ಆಗಮಿಸಿದ ಅಪರಿಚಿತ ಯುವಕರಿಬ್ಬರು ಸಂಶಯಾಸ್ಪದ ರೀತಿಯಲ್ಲಿ ವರ್ತಿಸಿದ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ರವಿವಾರ ಬೆಳಗ್ಗೆ 11 ಗಂಟೆಯ ವೇಳೆಗೆ ಸುಧೀರ್‌ ಸೋನು ಅವರ ಮನೆಗೆ ಆಗಮಿಸಿದ ಮುಸ್ಲಿಂ ಯುವಕರಿಬ್ಬರು ನಿಮ್ಮ ಬಳಿ ಮಾತನಾಡಲಿಕ್ಕಿದೆ. ನಿಮ್ಮನ್ನು ಆಸಿಫ್ ಅವರು ಕಾರಿನಲ್ಲಿ ಕಾಯುತ್ತಿದ್ದಾರೆ ಎಂದು ಹೇಳಿದ್ದರು. ಈ ಬಗ್ಗೆ ಅನುಮಾನಗೊಂಡ ಸುಧೀರ್‌ ಮನೆಯಿಂದ ಹೊರಗೆ ಬರಲು ನಿರಾಕರಿಸಿದ್ದರು. ಅಪರಿಚಿತ ಯುವಕರ ಚಲನವಲನಗಳಿಂದ ಅನುಮಾನಗೊಂಡ ಸುಧೀರ್‌ ಅವರ ಪತ್ನಿ ಕೂಡ ಪತಿಯನ್ನು ಮನೆಯಿಂದ ಹೊರಗೆ ಹೋಗದಂತೆ ತಡೆದಿದ್ದರು. ಅಪರಿಚಿತರ ಬಳಿ ಆಯುಧಗಳು ಇರುವುದನ್ನು ಗಮನಿಸಿದ್ದು, ಈ ಬಗ್ಗೆ ಸುಧೀರ್‌ ಅವರು ಸಂಘಟನೆಯ ಪ್ರಮುಖರಲ್ಲಿ ಚರ್ಚಿಸಿ ಕಾಪು ಪೊಲೀಸ್‌ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

ವಿಚಾರಣೆ, ಮುಚ್ಚಳಿಕೆ
ದೂರು ಸ್ವೀಕರಿಸಿದ ಪೊಲೀಸರು ಕಾರ್ಯಪ್ರವೃತ್ತರಾಗಿ ಕಾರಿನಲ್ಲಿ ಬಂದಿದ್ದ ಆಸಿಫ್ ನನ್ನು ಪೊಲೀಸ್‌ ಠಾಣೆಗೆ ಕರೆಯಿಸಿ ಕಾಪು ವೃತ್ತ ನಿರೀಕ್ಷಕ ಪೂವಯ್ಯ, ಕಾಪು ಮತ್ತು ಶಿರ್ವ ಠಾಣಾಧಿಕಾರಿಗಳ ಸಮ್ಮುಖದಲ್ಲಿ ಸುದೀರ್ಘ‌ ವಿಚಾರಣೆ ನಡೆಸಿ, ಮುಚ್ಚಳಿಕೆ ಬರೆಯಿಸಿ ಪ್ರಕರಣವನ್ನು ಶಿರ್ವ ಪೊಲೀಸ್‌ ಠಾಣೆಗೆ ವರ್ಗಾಯಿಸಿದ್ದಾರೆ.

ಸಾಲ ಕೇಳಲು ಹೋಗಿದ್ದ !
ಆಸಿಫ್ ಅವರು ಸಾಲ ಕೇಳುವ ಸಲುವಾಗಿ ಸುಧೀರ್‌ ಅವರ ಮನೆ ಹತ್ತಿರ ಹೋಗಿರುವುದಾಗಿ ತಿಳಿಸಿದ್ದು, ಇದರಲ್ಲಿ ಬೇರೆ ಯಾವುದೇ ಉದ್ದೇಶಗಳಿಲ್ಲವೆಂದು ವಿಚಾರಣೆ ವೇಳೆ ತಿಳಿಸಿರುವುದಾಗಿ ಕಾಪು ಪೊಲೀಸ್‌ ಠಾಣಾಧಿಕಾರಿ ಶ್ರೀಶೈಲ ಮುರಗೋಡ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next