Advertisement

ಪರವಾನಿಗೆ ಇಲ್ಲದೆ ಮರ ಸಾಗಾಟ ಪತ್ತೆ; ವಶಕ್ಕೆ

01:06 AM Jul 31, 2022 | Team Udayavani |

ಸುಳ್ಯ: ತಾಲೂಕಿನ ಅಜ್ಜಾವರ ಗ್ರಾಮದ ಮುಂಡೋಳಿಮೂಲೆ ಸಮೀಪದಿಂದ ಹಲಸಿನ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸುಳ್ಯ ಅರಣ್ಯ ಇಲಾಖೆ ಸಿಬಂದಿಯು ವಾಹನ, ಮರದ ದಿಮ್ಮಿ ವಶಪಡಿಸಿಕೊಂಡು, ನಾಲ್ವರ ವಿರುದ್ಧ ಕೇಸು ದಾಖಲಿಸಿಕೊಂಡ ಘಟನೆ ಜು. 29ರ ರಾತ್ರಿ ನಡೆದಿದೆ.

Advertisement

ಅರಣ್ಯ ಇಲಾಖೆ ಸಿಬಂದಿ ರಾತ್ರಿ ಗಸ್ತು ತಿರುಗುತ್ತಿದ್ದಾಗ ಮುಂಡೋಳಿಮೂಲೆಯ ಮುಳ್ಯ ಕಜೆ ಎಂಬಲ್ಲಿ ವಾಹನದಲ್ಲಿ ಹಲಸಿನ ಮರದ ದಿಮ್ಮಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ತತ್‌ಕ್ಷಣ ಅರಣ್ಯ ಇಲಾಖೆಯವರು ವಾಹನವನ್ನು ತಡೆದು, ಪರವಾನಿಗೆ ಇಲ್ಲದೆ ಮರ ಸಾಗಿಸುತ್ತಿದ್ದ ಮಹಮ್ಮದ್‌ ಶಫೀಕ್‌ ಅಡ್ಕಾರ್‌, ಸುಂದರ್‌ ಅಡ್ಕಾರ್‌, ಫೈಝಲ್‌ ಅಡ್ಕಾರ್‌ ನ‌ನ್ನು ವಶಕ್ಕೆ ಪಡೆದಿದ್ದರು. ಅವರು ನೀಡಿದ ಹೇಳಿಕೆಯಂತೆ ಮರ ಸಾಗಾಟದ ಪ್ರಮುಖ ಆರೋಪಿ ಅಬ್ದುಲ್‌ ಮಜೀದ್‌ ನಡುವಡ್ಕ ಸೇರಿದಂತೆ ನಾಲ್ವರ ವಿರುದ್ಧ ಕೇಸು ದಾಖಲಾಗಿದೆ.

ಸುಳ್ಯ ಎ.ಸಿ.ಎಫ್. ಪ್ರವೀಣ್‌ ಕುಮಾರ್‌ ಶೆಟ್ಟಿ, ರೇಂಜರ್‌ ಗಿರೀಶ್‌ ಮಾರ್ಗದರ್ಶನದಲ್ಲಿ ಫಾರೆಸ್ಟರ್‌ ಯಶೋಧರ, ಸಿಬಂದಿ ದೇವಿಪ್ರಸಾದ್‌, ಲಿಂಗಪ್ಪ, ಗಂಗಾಧರ್‌, ಪುರುಷೋತ್ತಮ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next