Advertisement

ಕೊಲೆ: ಮಂಗಳೂರಿನಲ್ಲಿ ದಂಪತಿ ಬಂಧನ: ಮೂರು ದಿನ ಹಿಂಸೆ ಕೊಟ್ಟು ಮೂಟೆ ಕಟ್ಟಿದ ಹಂತಕರು!

09:22 AM Jul 13, 2022 | Team Udayavani |

ಬೆಂಗಳೂರು: ತನ್ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಪತಿ ಜತೆ ಸೇರಿ ಕೊಲೆಗೈದು ಮೂಟೆ ಕಟ್ಟಿದ್ದ ಮಹಿಳೆ ಸೇರಿ ಮೂವರನ್ನು ಬೆಂಗಳೂರಿನ ಕಾಡುಗೋಡಿ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ.

Advertisement

ಕಾಡುಗೋಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಉತ್ತರ ಪ್ರದೇಶ ಮೂಲದ ವಿಶಾಲ್‌ ಪ್ರಜಾಪತಿ (24), ಆತನ ಪತ್ನಿ ರೂಬಿ ಪ್ರಜಾಪತಿ (23) ಮತ್ತು ಕೊಲೆಯಾದ ಬಿಹಾರ ಮೂಲದ ಓಂನಾಥ್‌ಸಿಂಗ್‌ ಪತ್ನಿ ಗುಂಜಾದೇವಿ (35) ಬಂಧಿತರು. ಆರೋಪಿಗಳು ಕೆಲವು ದಿನಗಳ ಹಿಂದೆ ಗುಟ್ಕಾ ವ್ಯಾಪಾರಿ ಓಂನಾಥ್‌ ಸಿಂಗ್‌ (40) ಅವರನ್ನು ಮೂರು ದಿನ ಮನೆಯಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿ ಕೊಲೆಗೈದು ಮೃತದೇಹವನ್ನು ಮೂಟೆ ಕಟ್ಟಿ ಬೆಳತೂರು-ಕೊಡಿಗೇಹಳ್ಳಿ ಮುಖ್ಯ ರಸ್ತೆಯ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿಯ ಚರಂಡಿಯಲ್ಲಿ ಬಿಸಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಕೆಲವು ತಿಂಗಳ ಹಿಂದೆ ವಿಶಾಲ್‌ 15 ಸಾವಿರ ರೂ.ಸಾಲವನ್ನು ಓಂನಾಥ್‌ ಸಿಂಗ್‌ಗೆ ಕೊಟ್ಟು ಕೆಲಸಕ್ಕೆ ಮಂಗಳೂರಿಗೆ ಹೋಗಿದ್ದ. ಆಗ ರೂಬಿ ಮತ್ತು ಓಂನಾಥ್‌ ಆತ್ಮೀಯತೆ ಹೆಚ್ಚಾಗಿತ್ತು. ವಿಶಾಲ್‌ ವಾಪಸ್‌ ಮನೆಗೆ ಬಂದಾಗ ಈ ವಿಷಯ ಗೊತ್ತಾಗಿತ್ತು. ದೈಹಿಕ ಸಂಪರ್ಕಕ್ಕಾಗಿ ಓಂನಾಥ್‌ಸಿಂಗ್‌ ಬಲವಂತಪಡಿಸಿದ್ದ ಎನ್ನುವ ಅಂಶವನ್ನು ರೂಬಿ ತನ್ನ ಪತಿಗೆ ತಿಳಿಸಿದ್ದಳು. ಅನಂತರ ಅವರು ಈ ವಿಷಯವನ್ನು ಗುಂಜಾದೇವಿಗೆ ತಿಳಿಸಿ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next