Advertisement

ಹಿಂದೂ ದೇವರುಗಳಿಗೆ ಅವಮಾನಿಸಿದ ಆರೋಪ: ಆಡಿಯೋ, ವೀಡಿಯೋ ಎಡಿಟ್‌ ಮಾಡಿ ರವಾನೆ; ದೂರು

12:21 AM Jun 20, 2022 | Team Udayavani |

ಪುತ್ತೂರು: ಯೂಟ್ಯೂಬ್‌ ಚಾನೆಲ್‌ವೊಂದು ರಾಮ ದೇವರ ವಿಚಾರದಲ್ಲಿ ಆಡಿಯೋ ಮತ್ತು ವೀಡಿಯೋ ಎಡಿಟ್‌ ಮಾಡಿ ನನ್ನ ಫೋನ್‌ ನಂಬರ್‌ ಹಾಗೂ ಭಾವಚಿತ್ರ ಬಳಸಿ ತಪ್ಪು ಸಂದೇಶ ರವಾನೆ ಮಾಡಿರುವ ಕಾರಣದಿಂದ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಈ ಕುರಿತು ಯೂಟ್ಯೂಬ್‌ ಚಾನೆಲ್‌ ಮತ್ತು ಅದರ ನಿರೂಪಕಿ ವಿರುದ್ಧ ಕಾಂಗ್ರೆಸ್‌ ಪಕ್ಷದ ಐಟಿ ಸೆಲ್‌ನ ಕಾರ್ಯದರ್ಶಿ ಶೈಲಜಾ ಅಮರನಾಥ್‌ ನೀಡಿದ ದೂರಿನಂತೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಜೂ. 17ರಂದು ತಪ್ಪು ಸಂದೇಶ ರವಾನೆ ಮಾಡಲಾಗಿದ್ದು ಈ ಕಾರಣದಿಂದ ನನಗೆ ಜೀವ ಬೆದರಿಕೆ ಕರೆಗಳು ಬರುತ್ತಿರುವುದಲ್ಲದೇ ಮನೆಗೆ ಕಲ್ಲು ಎಸೆದು ಕಿಟಕಿ ಗಾಜು ಪುಡಿ ಮಾಡಿ ಮಡ್‌ ಆಯಿಲ್‌ ಚೆಲ್ಲಿದ್ದಾರೆ.

ಕಚೇರಿಯಲ್ಲಿ ಶ್ರದ್ಧಾಂಜಲಿ ಫೋಟೋ ಹಾಕಿ ಮಾನಹಾನಿ ಮಾಡಿದ್ದಾರೆ. ಈ ಕೃತ್ಯಕ್ಕೆ ಕಾರಣವಾದ ವಿಕ್ರಮ್‌ ಯೂಟ್ಯೂಬ್‌ ಚಾನೆಲ್‌ನ ನಿರೂಪಕಿ ಎಂ. ಎಸ್‌. ಮುಮ್ತಾಸ್‌ ಹಾಗೂ ಚಾನೆಲ್‌ ಮೇಲೆ ಕ್ರಮ ಕೈಗೊಳ್ಳಬೇಕಾಗಿ ದೂರಿನಲ್ಲಿ ಆಗ್ರಹಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next