Advertisement

ರಾಜಾ ಕೊಲೆ ಪ್ರಕರಣ: ಪ್ರಮುಖ ಆರೋಪಿ ನವೀನ್‌ ಬಂಧನ

01:00 AM Jun 16, 2022 | Team Udayavani |

ಮಂಗಳೂರು: ಬೈಕಂಪಾಡಿ ಮೀನಕಳಿಯ ರಸ್ತೆ ಬದಿಯಲ್ಲಿ ರೌಡಿ ಶೀಟರ್‌ ರಾಜಾ ಯಾನೆ ರಾಘವೇಂದ್ರ ಕೊಲೆ ಪ್ರಕರಣದ ಪ್ರಮುಖ ಆರೋಪಿ ನವೀನ್‌ ಯಾನೆ ಮೈಕೆಲ್‌ ನವೀನ್‌ ನನ್ನು ಪೊಲೀಸರು ಬುಧವಾರ ಬಂಧಿಸಿ ನ್ಯಾಯಾಯಲಯಕ್ಕೆ ಹಾಜರುಪಡಿಸಿದ್ದಾರೆ.

Advertisement

ಈತನ ವಿರುದ್ಧ ಮೂರು ಕೊಲೆ ಪ್ರಕರಣ ಸೇರಿದಂತೆ ಒಟ್ಟು 8 ಕ್ರಿಮಿನಲ್‌ ಪ್ರಕರಣಗಳಿವೆ. ರಾಜಾನ ಕೊಲೆಗೆ ಪ್ರಮುಖ ಸಂಚು ರೂಪಿಸಿ ಮಾರಕಾಯುಧಗಳೊಂದಿಗೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ರಾಜಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ 12 ಮಂದಿಯನ್ನು ಬಂಧಿಸಲಾಗಿದೆ.

ಫ್ಲ್ಯಾಟ್‌ನಿಂದ ಬಿದ್ದು ಬಾಲಕಿ ಸಾವು
ಮಂಗಳೂರು: ನಗರದ ಕಂಕನಾಡಿಯ ವಸತಿ ಸಂಕೀರ್ಣವೊಂದರ ಐದನೆ ಮಹಡಿಯಿಂದ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಬುಧವಾರ ಸಂಜೆ ಸಂಭವಿಸಿದೆ.

ನಗರದ ಖಾಸಗಿ ಶಾಲೆಯೊಂದರ ಎಸೆಸೆಲ್ಸಿ ವಿದ್ಯಾರ್ಥಿನಿ ಸೆಹರ ಇಮಿ¤ಯಾಜ್‌(15) ಸಂಜೆ ಕುರ್ಚಿ ಮೇಲೆ ಹತ್ತಿ ಬಾಲ್ಕನಿಯ ಕರ್ಟನ್‌ ಸರಿಪಡಿಸುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next