Advertisement

ಓವರ್‌ಟೇಕ್‌ ಮಾಡುವಾಗ ಬೈಕ್‌ ಸ್ಕಿಡ್‌; ಕಾರಿನಡಿಗೆ ಬಿದ್ದ ಬೈಕ್‌ ಸವಾರ ಸಾವು  

01:24 AM Jun 13, 2022 | Team Udayavani |

ಕೈಕಂಬ/ ಕಿನ್ನಿಗೋಳಿ: ಓವರ್‌ಟೇಕ್‌ ಮಾಡುವ ವೇಳೆ ಬೈಕ್‌ ಸ್ಕಿಡ್‌ ಆಗಿ ಸವಾರ ಕಾರಿನಡಿಗೆ ಬಿದ್ದು ಮೃತಪಟ್ಟ ಘಟನೆ ಗಂಜಿಮಠ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಗುರುಪುರ ಕೈಕಂಬದ ಸಮೀಪ ಸಂಭವಿಸಿದೆ.

Advertisement

ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಮೂಡು ಬಿದಿರೆಯಿಂದ ಕೈಕಂಬದ ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದ ಕೆರೆಕಾಡಿನ ಪ್ರವೀಣ್‌ (36) ಬೆೈಕ್‌ ಅನ್ನು ಗಂಜಿಮಠ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಗುರುಪುರ ಕೈಕಂಬದ ಸಮೀಪ ಓವರ್‌ಟೇಕ್‌ ಮಾಡುವ ವೇಳೆ ಬೈಕ್‌ ಸ್ಕಿಡ್‌ ಆಗಿದೆ. ಈ ಸಂದರ್ಭ ಕಾರಿನಡಿಗೆ ಬಿದ್ದ ಬೈಕ್‌ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಘಟನೆ ರವಿವಾರ ಮಧ್ಯಾಹ್ನ ಸಂಭವಿಸಿದೆ.

ಮಳೆ ಬಂದ ಕಾರಣ ಹೆದ್ದಾರಿ ಜಾರುತ್ತಿದ್ದು ಪ್ರವೀಣ್‌ ಅವರು ಹೆಲ್ಮೆಟ್‌ ಹಾಕದೇ ಇರುವುದು ಸಾವಿಗೆ ಕಾರಣವಾಗಿದೆ. ಅಪಘಾತದ ವೀಡಿಯೋ ವೆೈರಲ್‌ ಆಗಿದೆ.

ಕಳೆದ ವಾರ ಇದೇ ಜಾಗದಲ್ಲಿ ಓವರ್‌ಟೇಕ್‌ ಮಾಡುವ ವೇಳೆ ಅಪಘಾತವಾಗಿದ್ದು ಅದರಲ್ಲಿ ಬೆೈಕ್‌ ಕಾರಿಗೆ ಢಿಕ್ಕಿ ಹೊಡೆದಿತ್ತು. ಬೈಕ್‌ ಸವಾರ ಹೆಲ್ಮೆಟ್‌ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದ.

ಕೆರೆಕಾಡು ನಿವಾಸಿ ಸುಂದರಿ ಅವರ ಇಬ್ಬರು ಪುತ್ರರಲ್ಲಿ ಪ್ರವೀಣ್‌ ಕಿರಿಯವ. ಅವರು ತಾಯಿ, ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಪ್ರವೀಣ್‌ ಅವರು ಕೂಲಿ ಕೆಲಸ ಮಾಡುತ್ತಿದ್ದು, ಹಲವಾರು ವರ್ಷಗಳಿಂದ ಮಂಗಳೂರು, ಮೂಡುಬಿದಿರೆಯ ಹಲವಾರು ಕೀಲು ಕುದುರೆ ತಂಡದಲ್ಲಿ ವೇಷ ಹಾಕುತ್ತಿದ್ದರು. ನವರಾತ್ರಿಯ ಹುಲಿ ವೇಷಧಾರಿಯಾಗಿದ್ದು ಪುನರೂರು ಮೊಸರು ಕುಡಿಕೆಯ ಸಂದರ್ಭ ಹುಲಿ ವೇಷ ಹಾಕುತ್ತಿದ್ದು ಉತ್ತಮ ಕ್ರಿಕೆಟ್‌ ಪಟುವಾಗಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next