Advertisement

ರಸ್ತೆ ಅಪಘಾತ: ಇನ್ನೋವಾ ಕಾರು-ಬೈಕ್‌ ಢಿಕ್ಕಿ; ಕೇರಳ ಮೂಲದ ವ್ಯಕ್ತಿ ಸಾವು

06:17 PM Jun 07, 2022 | Team Udayavani |

ಮಡಿಕೇರಿ: ಇನ್ನೋವಾ ಕಾರು ಮತ್ತು ಬೈಕ್‌ ನಡುವೆ ಢಿಕ್ಕಿ ಸಂಭವಿಸಿ ಕೇರಳ ಮೂಲದ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಡಿಕೇರಿ ಹೊರ ವಲಯದ ಬೊಯಿಕೇರಿ ಬಳಿ ನಡೆದಿದೆ.

Advertisement

ಬೈಕ್‌ನ ಹಿಂಬದಿ ಸವಾರನ ಕಾಲು ಮುರಿಯಲ್ಪಟ್ಟಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಣ್ಣೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಕಣ್ಣೂರಿನ ಮೊಹಮ್ಮದ್‌ ಶಾನಿಲ್‌(24) ಮೃತ ಯುವಕನಾಗಿದ್ದು, ರಫ್ಯಾದ್(24) ಅವರ ಕಾಲಿಗೆ ಗಂಭೀರ ಗಾಯವಾಗಿದೆ.

ಕೇರಳ ಕಣ್ಣೂರು ಮೂಲದ ಮೊಹಮ್ಮದ್‌ ಶಾನಿಲ್‌ ಮತ್ತು ರಫ್ಯಾದ್ ಅವರು ಬೆಂಗಳೂರಿಗೆ ತೆರಳಿ, ಅಲ್ಲಿನ ಪ್ರವಾಸ ಮುಗಿಸಿಕೊಂಡು ಜೂ. 5ರಂದು ರಾತ್ರಿ ಬೆಂಗಳೂರು-ಮಡಿಕೇರಿ ಮಾರ್ಗವಾಗಿ ಕೇರಳ ಕಣ್ಣೂರಿಗೆ ತೆರಳುತ್ತಿದ್ದರು. ಜೂ. 6ರ ಬೆಳಗಿನ ಜಾವ ಮಡಿಕೇರಿ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 275ನ ಸಿಂಕೋನದ ಬಳಿ ಮಡಿಕೇರಿಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಪ್ರವಾಸಿಗರಿದ್ದ ಇನ್ನೋವಾ ಕಾರು ಮತ್ತು ಬೈಕ್‌ ನಡುವೆ ಅಪಘಾತ ಸಂಭವಿಸಿದೆ.

ಮಡಿಕೇರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕಾಗಮಿಸಿ ಇನ್ನೋವಾ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಾಳು ರಫ್ಯಾದ್ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಣ್ಣೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

Advertisement

ಅಪಘಾತದ ತೀವ್ರತೆಗೆ ಬೈಕ್‌ ಸಂಪೂರ್ಣ ನಜ್ಜುಗುಜ್ಜಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next