Advertisement

ಪಿಕ್‌ ಅಪ್‌-ಬೈಕ್‌ ಢಿಕ್ಕಿ; ಇಬ್ಬರಿಗೆ ತೀವ್ರ ಗಾಯ

01:17 AM Jun 07, 2022 | Team Udayavani |

ಪಡುಬಿದ್ರಿ: ಹೆದ್ದಾರಿ ಯೂ ಟರ್ನ್ ವೇಳೆ ಬೊಲೆರೋ ಪಿಕ್‌ ಅಪ್‌ ವಾಹನದ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದಾಗಿ ಪಡುಬಿದ್ರಿ ಬೀಡು ಬಳಿಯ ಸುಜ್ಲಾನ್‌ ಗೇಟ್‌ ಎದುರು ಜೂ. 5ರ ಸಂಜೆ ಉಡುಪಿ-ಮಂಗಳೂರು ಏಕಮುಖ ಸಂಚಾರ ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್‌ಗೆ ಢಿಕ್ಕಿಯಾಗಿ ಮೂಲತಃ ಬಾಗಲಕೋಟೆ ಜಿಲ್ಲೆಯ, ಹೊಸಬೆಟ್ಟು ನಿವಾಸಿ ಬೈಕ್‌ ಸವಾರ ನಾಗರಾಜ್‌ (25) ಹಾಗೂ ಸಹ ಸವಾರ ಗಂಗಾಧರ್‌ (18) ತೀವ್ರವಾಗಿ ಗಾಯಗೊಂಡಿದ್ದಾರೆ.

Advertisement

ಅಪಘಾತದ ರಭಸಕ್ಕೆ ಬೈಕ್‌ನ ಹ್ಯಾಂಡಲ್‌ ತುಂಡಾಗಿದೆ. ಮುಂಡ್ಕೂರಿಗೆ ಪಲಿಮಾರು ಮೂಲಕ ಹೋಗುವ ಧಾವಂತದಲ್ಲಿ ಸುಜ್ಲಾನ್‌ ಗೇಟ್‌ ರಸ್ತೆಗೆ ಪಿಕ್‌ ಅಪ್‌ ಚಾಲಕ ತಿರುಗಿಸುತ್ತಿದ್ದಾಗ ಅಪಘಾತ ಸಂಭವಿಸಿದೆ.

ಸವಾರ ನಾಗರಾಜ್‌ ಅವರ ಬಲಕೈ, ಬಲಗಾಲು ಹಾಗೂ ಮುಖಕ್ಕೆ ತೀವ್ರ ಗಾಯಗಳಾಗಿವೆ. ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ, ಹಿಂಬದಿ ಸವಾರ ಗಂಗಾಧರ್‌ ಅವರ ಕೈ ಕಾಲು ಹಾಗೂ ಬೆನ್ನಿಗೆ ಗಾಯಗಳಾಗಿದ್ದು, ಇಬ್ಬರನ್ನೂ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next