Advertisement

Crime: ವೃದ್ಧೆಯ ಕೊಲೆಗೈದು ಮೃತದೇಹ ತುಂಡು ಮಾಡಿ ಡ್ರಂನಲ್ಲಿಟ್ಟ ಹಂತಕರು

12:28 PM Feb 26, 2024 | Team Udayavani |

ಬೆಂಗಳೂರು: ವೃದ್ಧೆಯನ್ನು ಕೊಲೆಗೈದು, ಗುರುತು ಸಿಗಬಾರದೆಂದು ಹಂತಕರು ಆಕೆಯ ಮೃತದೇಹವನ್ನು ನಾಲ್ಕು ತುಂಡುಗಳನ್ನಾಗಿ ಮಾಡಿ ಡ್ರಮ್‌ನಲ್ಲಿ ಇಟ್ಟು ಪರಾರಿಯಾಗಿರುವ ಘಟನೆ ಕೆ.ಆರ್‌.ಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ನಿಸರ್ಗ ಲೇಔಟ್‌ನ ಅಪಾರ್ಟ್‌ಮೆಂಟ್‌ವೊಂದರ ನಿವಾಸಿ ಸುಶೀಲಮ್ಮ(70) ಕೊಲೆಯಾದ ಮಹಿಳೆ. ಎರಡು ದಿನಗಳ ಹಿಂದೆ ಘಟನೆ ನಡೆದಿರುವ ಸಾಧ್ಯತೆಯಿದೆ. ಭಾನುವಾರ ಸಂಜೆ ಸ್ಥಳೀಯರು ಡ್ರಮ್‌ ಗಮನಿಸಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

ಕೊಲೆಯಾದ ಸುಶೀಲಮ್ಮ ಅವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳು ಇದ್ದಾರೆ. ಮೂವರು ಮಕ್ಕಳು ಪ್ರತ್ಯೇಕವಾಗಿ ವಾಸವಾಗಿದ್ದು. ಸುಶೀಲಮ್ಮ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ವೊಂದನ್ನು ಭೋಗ್ಯಕ್ಕೆ ಪಡೆದು ವಾಸವಾಗಿದ್ದರು. ಎರಡು ದಿನಗಳ ಹಿಂದೆ ಯಾರೋ ಅಪರಿಚಿತರು ವೃದ್ಧೆಯ ಮನೆಗೆ ನುಗ್ಗಿ ಕೊಲೆಗೈದು, ಬಳಿಕ ಆಕೆಯ ಮೃತದೇಹವನ್ನು ನಾಲ್ಕು ತುಂಡುಗಳನ್ನಾಗಿ ಮಾಡಿ, ಡ್ರಮ್‌ನಲ್ಲಿ ಇಟ್ಟಿದ್ದಾರೆ.

ಬಳಿಕ ಆ ಡ್ರಮ್‌ ಅನ್ನು ಅಪಾರ್ಟ್‌ ಮೆಂಟ್‌ ಸಮೀಪದ ಪಾಳು ಬಿದ್ದ ಮನೆ ಬಳಿ ಇಟ್ಟು ಪರಾರಿಯಾಗಿದ್ದಾರೆ. ಭಾನುವಾರ ಸಂಜೆ ಆ ಮನೆ ಬಳಿ ಕೆಟ್ಟ ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡ ಸ್ಥಳೀಯರು ಡ್ರಮ್‌ ತೆರೆದು ನೋಡಿದಾಗ ವೃದ್ಧೆಯ ಮೃತದೇಹ ಪತ್ತೆಯಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬಳಿಕ ಸ್ಥಳಕ್ಕೆ ಕೆ.ಆರ್‌.ಪುರ ಪೊಲೀಸರು ಹಾಗೂ ವೈಟ್‌ಫೀಲ್ಡ್‌ ಡಿಸಿಪಿ ಶಿವ ಕುಮಾರ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ ರಮನ್‌ ಗುಪ್ತಾ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆ ಕುರಿತು ಮಾತನಾಡಿದ ಹೆಚ್ಚುವರಿ ಪೊಲೀಸ್‌ ಆಯುಕ್ತ ರಮನ್‌ ಗುಪ್ತಾ, ಎರಡು ದಿನಗಳ ಹಿಂದೆ ಘಟನೆ ನಡೆದಿರುವ ಸಾಧ್ಯತೆಯಿದೆ. 70 ವರ್ಷದ ವೃದ್ಧೆಯ ಕೊಲೆಯಾಗಿದೆ. ಕೊಲೆ ಮಾಡಿ ಮೃತ ದೇಹ ಬಿಸಾಡಿ ಹೋಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next