Advertisement

ಸಚಿವರ ನಿವಾಸಕ್ಕೆ ಏಡಿಗಳ ಎಸೆತ

12:35 AM Jul 10, 2019 | mahesh |

ಮುಂಬಯಿ: ಮಹಾರಾಷ್ಟ್ರದ ಜಲ ಸಂರಕ್ಷಣಾ ಸಚಿವ ತಾನಾಜಿ ಸಾವಂತ್‌ ಅವರ ನಿವಾಸದ ಮೇಲೆ ನ್ಯಾಷನಲ್‌ ಕಾಂಗ್ರೆಸ್‌ ಪಾರ್ಟಿಯ (ಎನ್‌ಸಿಪಿ) ಕಾರ್ಯಕರ್ತರು, ಜೀವಂತ ಏಡಿಗಳನ್ನು ಎಸೆದಿರುವ ಘಟನೆ ಮಂಗಳ ವಾರ ನಡೆದಿದೆ.

Advertisement

ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ರತ್ನಗಿರಿ ಜಿಲ್ಲೆಯ ತಿವಾರೆಯಲ್ಲಿನ ಚೆಕ್‌ ಡ್ಯಾಂ ಒಡೆ ದಿದ್ದಕ್ಕೆ ಅದರಲ್ಲಿದ್ದ ಏಡಿಗಳೇ ಕಾರಣ ಎಂದು ಸಾವಂತ್‌ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ. ಸಚಿವರ ಹೇಳಿಕೆಯಿಂದ ರೊಚ್ಚಿಗೆದ್ದ ಎನ್‌ಸಿಪಿ ಕಾರ್ಯ ಕರ್ತರು, ಮಂಗಳವಾರ ವಿವಿಧ ಬಾಕ್ಸ್‌ಗಳಲ್ಲಿ ಏಡಿಗಳನ್ನು ತಂದು ಸಚಿವರ ನಿವಾಸದ ಅಂಗಳಕ್ಕೆ ಎಸೆದು ಹೋಗಿದ್ದಾರೆ. ಇದಕ್ಕೂ ಮೊದಲು, ಏಡಿಗಳೊಂದಿಗೆ ಶಾಹು ಪುರಿ ಪೊಲೀಸ್‌ ಠಾಣೆಗೆ ಹೋಗಿದ್ದ ಕಾರ್ಯ ಕರ್ತರು, ಏಡಿಗಳ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಬೇಕೆಂದು ಆಗ್ರಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next