Advertisement
ನಗರದ ಅಂಬೇಡ್ಕರ ವೃತ್ತದಲ್ಲಿ ಸೇರಿದ ಪಕ್ಷದ ಕಾರ್ಯಕರ್ತರು ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್ಯಾಲಿ ಮೂಲಕ ಆಗಮಿಸಿ ಪ್ರಧಾನ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ಕೃಷಿಯನ್ನು ಮರ್ಯಾದೆ ಕಾಯಕವೆಂದು ಭಾವಿಸಲಾಗಿತ್ತು. ಸರ್ಕಾರಿ ನೌಕರಿ ಮಾಡುವುದು ಕನಿಷ್ಠ ಎಂದು ಪರಿಗಣಿಸಲಾಗಿತ್ತು. ಆದರೆ, 70 ವರ್ಷಗಳ ಸ್ವತಂತ್ರ ಭಾರತದಲ್ಲಿ ಸದ್ಯ ಕೃಷಿ ಕಾಯಕವನ್ನು ರೈತರು ಕೈಬಿಡಲು ಮುಂದಾಗಿದ್ದು, ಇದಕ್ಕೆ ಕೃಷಿ ಯು ಒಂದು ಲಾಭದಾಯಕ ಉದ್ಯೋಗ ಆಗದಿರುವುದುಕಾರಣ ಎಂದು ಮನವಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಲೆ ನಿಗದಿಪಡಿಸಬೇಕು. ಇದಕ್ಕಾಗಿ ಒಂದು ಲಕ್ಷ ಕೋಟಿ ಬೆಲೆ ನಿಯಂತ್ರಣ ನಿಧಿ ಬಿಡುಗಡೆ ಮಾಡಬೇಕು. ಬೀಜ, ಗೊಬ್ಬರ,
ಔಷಧ, ಪಂಪ್ಸೆಟ್, ಜನರೇಟರ್ ಗಳ ಮಾರಾಟಗಳನ್ನು ಜಿಎಸ್ಟಿಯಿಂದ ಹೊರಗಿರಿಸಬೇಕು. ಕೃಷಿಕರು ಮತ್ತು ಕೃಷಿ
ಕಾರ್ಮಿಕರಿಗೆ ಪ್ರತಿ ತಿಂಗಳು 5 ಸಾವಿರ ಗೌರವ ಧನ ನೀಡಬೇಕು ಹಾಗೂ ಬಗರ ಹುಕುಂ ಕೃಷಿ ಕ್ರಮಗೊಳಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಸಿಪಿಐ ಕಾರ್ಯದರ್ಶಿ ಬಾಬುರಾವ್ ಹೊನ್ನಾ, ಪ್ರಮುಖರಾದ ಪ್ರಭುರಾವ್ ಕರನಾಯಕ, ಪ್ರಭು ಹೊಚಕನಳ್ಳಿ, ಮುನಿರೊದ್ದೀನ್, ರಾಮಯ್ಯ ಮಠಪತಿ, ಪಾಂಡುರಂಗ ಪ್ಯಾಗೆ, ಗುರುನಾಥ ಬಿರಾದಾರ, ಬಾಬುರಾವ್ ವಾಡೇಕರ್, ವೀರಶೆಟ್ಟಿ ಕುಂಬಾರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.