Advertisement

Election… Election; ತಡರಾತ್ರಿ ಏಕಾಏಕಿ ದೊಡ್ಡಗೌಡರನ್ನು ಭೇಟಿ ಮಾಡಿದ ಸಿಪಿ ಯೋಗೇಶ್ವರ್

11:57 AM Feb 12, 2024 | Team Udayavani |

ರಾಮನಗರ: ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ದತೆ ನಡೆಯುತ್ತಿರುವಂತೆ ಬಿಜೆಪಿ ನಾಯಕ, ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರು ರವಿವಾರ ತಡರಾತ್ರಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿಯಾಗಿದ್ದಾರೆ.

Advertisement

ಬೆಂಗಳೂರಿನ ಪದ್ಮನಾಭನಗರದ ನಿವಾಸದಲ್ಲಿ ದೇವೇಗೌಡರನ್ನು ಸಿಪಿ ಯೋಗೇಶ್ವರ್ ಅವರು ಭೇಟಿ ಮಾಡಿದ್ದಾರೆ. ಲೋಕಸಭಾ ಚುನಾವಣೆ ಬಗ್ಗೆ ದೊಡ್ಡಗೌಡರ ಜೊತೆ ಸಿಪಿವೈ ಚರ್ಚೆ ಮಾಡಿದ್ದಾರೆ.

ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಲೋಕಸಭೆ ಚುನಾವಣೆ ಬಗ್ಗೆ ಗೌಡರ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ.

“ಭೇಟಿ ವೇಳೆ ನಿನ್ನ ಬಲಕ್ಕೆ ನಾವಿದ್ದೇವೆ” ಎಂದು ದೊಡ್ಡಗೌಡರು ಸಿಪಿವೈಗೆ ಧೈರ್ಯ ತುಂಬಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next