Advertisement

ಸಾಗರ: ಕೋವಿಡ್ ಲಸಿಕೆ ಹಾಕಿಸಿಕೊಂಡ ವಿಶೇಷ ಚೇತನ ಮಕ್ಕಳು

08:22 PM Jan 13, 2022 | Team Udayavani |

ಸಾಗರ: ಸರ್ಕಾರ 15 ವರ್ಷ ದಾಟಿದ ಮಕ್ಕಳಿಗೆ ಕೋವಿಡ್ ಪ್ರತಿಬಂಧಕ ಲಸಿಕೆ ಹಾಕಲು ನಿರ್ಧರಿಸಿದ ಬೆನ್ನಲ್ಲಿ ತಾಲೂಕಿನಲ್ಲಿ ಗುರುವಾರ ಗಮನಿಸಲೇಬೇಕಾದ ಪ್ರಸಂಗವೊಂದು ನಡೆಯಿತು.

Advertisement

ತಾಲೂಕಿನ ಲಸಿಕಾ ಕಾರ್ಯಕ್ರಮ ಭೀಮನಕೋಣೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುಂಗರವಳ್ಳಿ ಗ್ರಾಮದ ಚೈತನ್ಯ ವಿಶೇಷ ಶಿಕ್ಷಣ ಶಾಲೆಗೆ ತೆರಳಿದೆ. ಅಲ್ಲಿನ ಲಸಿಕೆಗೆ ಅರ್ಹತೆ ಪಡೆದ ಮಕ್ಕಳಿಗೆ ಡಾ. ವಾಸುದೇವ್, ಡಾ. ಆದಿತ್ಯ, ಅಖಿಲ, ಶೋಭಾ ಅವರ ತಂಡ ಕೊವ್ಯಾಕ್ಸಿನ್ ಲಸಿಕೆ ನೀಡಿತು.

ಮಕ್ಕಳು ಬೆದರದೆ, ಕಿರಿಕಿರಿ ಮಾಡದೆ ಸಮಾಧಾನದಿಂದ ಲಸಿಕೆ ಪಡೆದರು ಎಂದು ಲಸಿಕಾ ಕಾರ್ಯಕ್ರಮದ ನಿರ್ವಹಣೆ ನಡೆಸುತ್ತಿರುವ ಮ.ಸ. ನಂಜುಂಡಸ್ವಾಮಿ ಪತ್ರಿಕೆಗೆ ತಿಳಿಸಿದರು. ಈ ವೇಳೆ ಸಂಸ್ಥೆಯ ಮುಖ್ಯಸ್ಥರಾದ ಶಾಂತಲಾ ಸುರೇಶ್, ಮಲ್ಲಿಕಾರ್ಜುನ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next