Advertisement

“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ

08:31 PM Oct 19, 2021 | Team Udayavani |

ನವದೆಹಲಿ: ಕೊರೊನಾಕ್ಕೆ ಲಸಿಕೆ ನೀಡುವ ವಿಚಾರದಲ್ಲಿ ಭಾರತ ಅದ್ಭುತ ಪ್ರಗತಿ ಸಾಧಿಸಿದೆ. ಇದುವರೆಗೆ 99 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ. 100 ಕೋಟಿಗೆ ಅತಿ ಸನಿಹವಿರುವ ಈ ಹೊತ್ತಿನಲ್ಲಿ 2ನೇ ಲಸಿಕೆ ನೀಡುವುದಕ್ಕೆ ಗಮನ ಹರಿಸಿ ಎಂದು ಕೇಂದ್ರ ಸರ್ಕಾರ; ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

Advertisement

ಇನ್ನೂ ದೊಡ್ಡ ಸಮೂಹ 2ನೇ ಲಸಿಕೆಯನ್ನು ಪಡೆದೇ ಇಲ್ಲ. ಹಾಗಾಗಿ ಇತ್ತ ಗಮನ ಹರಿಸಿ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕೇಂದ್ರ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಸೂಚಿಸಿದ್ದಾರೆ. ಅವರು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಚರ್ಚಿಸುವಾಗ ಈ ಸೂಚನೆ ನೀಡಿದ್ದಾರೆ.

ಇಲ್ಲಿ ಚರ್ಚೆಯಾಗಿರುವ ಇನ್ನೊಂದು ವಿಷಯವೆಂದರೆ ಹಲವು ರಾಜ್ಯಗಳಲ್ಲಿ ಬೇಕಾದಷ್ಟು ಲಸಿಕೆ ಸಂಗ್ರಹವಿದ್ದರೂ, 2ನೇ ಡೋಸ್‌ ನೀಡಿಲ್ಲ. ಹಾಗಾಗಿ ಮೊದಲು ಗುರಿ ತಲುಪಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ :ಹಳೆ ತಂತ್ರ ಬದಲಿಸಿದ ಪಾಕ್‌  : ಐಎಸ್‌ಎಸ್‌ ತಂತ್ರಗಾರಿಕೆ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next