Advertisement

Covid Updates: ಶೀಘ್ರದಲ್ಲೇ ಕೊರೊನಾ ಅಂತ್ಯ

11:48 PM Apr 12, 2023 | Team Udayavani |

ಹೊಸದಿಲ್ಲಿ: ದೇಶದಲ್ಲಿ ಸಾಂಕ್ರಾಮಿಕ ಪರಿಸ್ಥಿತಿ ಅಂತ್ಯಕ್ಕೆ ತಲುಪಿದ್ದು, ಇನ್ನೇನು 10-12 ದಿನಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ತಜ್ಞರು ಅಭಿ ಪ್ರಾಯಪಟ್ಟಿದ್ದಾರೆ. ಬುಧವಾರದ ವರದಿಗಳ ಪ್ರಕಾರ ದೇಶದಲ್ಲಿ ಒಂದೇ ದಿನದಲ್ಲಿ 7,830 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದು ಕಳೆದ 7 ತಿಂಗಳಲ್ಲಿ ದಾಖಲಾದ ಅತೀಹೆಚ್ಚು ಏಕದಿನ ಪ್ರಕ ರಣವಾಗಿದೆ. ಹೊಸ ಸೇರ್ಪಡೆಯೊಂದಿಗೆ ದೇಶದಲ್ಲಿ ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 40,215ಕ್ಕೆ ಏರಿಕೆಯಾಗಿದೆ.

Advertisement

ಆದಾಗ್ಯೂ ಪ್ರಕರಣಗಳ ಹೆಚ್ಚಳದ ನಡುವೆಯೂ ಆಸ್ಪತ್ರೆಗೆ ದಾಖಲಾಗುವಂಥ ಪರಿಸ್ಥಿತಿ ಕಡಿಮೆಯೇ ಇದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನೂ ಇಳಿಕೆಯಾಗಲಿದೆ. ಈ ಮೂಲಕ ಪ್ರಕರಣಗಳು ಅಂತ್ಯಕ್ಕೆ ತಲುಪಲಿವೆ ಎನ್ನಲಾಗಿದೆ.

ಇನ್ನು ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿ­ರುವುದರಿಂದ ಮುಂಜಾಗ್ರತ ಕ್ರಮವಾಗಿ ಬೂಸ್ಟರ್‌ ಡೋಸ್‌ಗಳ ಅಗತ್ಯ­ವಿದ್ದು, ಲಸಿಕೆ ತಯಾರಕ ಸಂಸ್ಥೆ ಸೀರಂ ಇನ್‌ಸ್ಟಿಟ್ಯೂಟ್‌, ಕೋವಿಶೀಲ್ಡ್‌ ಲಸಿಕೆಗಳ ಮರು ಉತ್ಪಾದನೆಗೆ ಸಜ್ಜುಗೊಂಡಿದೆ ಎಂದು ಸಂಸ್ಥೆ ಮುಖ್ಯಸ್ಥ ಅಡಾರ್‌ ಪೂನಾ­ವಾಲಾ ತಿಳಿಸಿದ್ದಾರೆ. ಮತ್ತೂಂದೆಡೆ ಹೊಸದಾಗಿ ಹೆಚ್ಚುವರಿ ಲಸಿಕೆ ಖರೀದಿ ಬಗ್ಗೆ ಕೇಂದ್ರ ಸರಕಾರ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಕೇಂದ್ರ ಆರೋಗ್ಯ ಸಚಿವ ರಾದ ಮನ್‌ಸುಖ್‌ ಮಾಂಡವೀಯ ಶೀಘ್ರವೇ ಈ ಕುರಿತು ಸಭೆ ನಡೆಸಲಿದ್ದು, ಔಷಧಗಳ ಲಭ್ಯತೆ, ದತ್ತಾಂಶ ಗೌಪ್ಯತೆ ಸಹಿತ ಅನೇಕ ಕಾಳಜಿ ವಿಚಾರಗಳ ಕುರಿತು ಇ-ಫಾರ್ಮಸಿ ಪ್ರತಿನಿಧಿಗಳ ಜತೆಗೂ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next