Advertisement

ಒಂದೇ ಕುಟುಂಬದ 7 ಮಂದಿಗೆ ಕೋವಿಡ್

02:23 PM Apr 26, 2021 | Team Udayavani |

ಕೆ.ಆರ್‌.ನಗರ: ಪಟ್ಟಣದ ಸುಭಾಷ್‌ನಗರ ಬಡಾವಣೆಯಲ್ಲಿ ಒಂದೇ ಕುಟುಂಬದ ಏಳು ಮಂದಿಗೆ ಕೊರೊನಾಸೋಂಕು ದೃಢಪಟ್ಟಿರುವುದು ಕಂಡು ಬಂದಿದೆ. ಈಹಿನ್ನೆಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಕೆ.ಆರ್‌.ಮಹೇಂದ್ರಪ್ಪ ಸಿಬ್ಬಂದಿಯೊಂದಿಗೆ ಭಾನುವಾರ ಸೋಂಕಿತರಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಬಡಾವಣೆಯ ಒಂದೇ ಕುಟುಂಬಕ್ಕೆ ಸೋಂಕುದೃಢಪಟ್ಟಿರುವ ಹಿನ್ನೆಲೆಯಲ್ಲಿ ಮನೆಯನ್ನು ಮೈಕ್ರೋಕಂಟೈನ್ಮೆಂಟ್‌ ವಲಯವೆಂದು ಘೋಷಿಸುವುದರ ಜತೆಗೆಸೋಂಕಿತರು ಹೊರಗಡೆ ಓಡಾಡದಂತೆ ಮನೆಯ ಸುತ್ತಶೀಟುಗಳನ್ನು ಆಳವಡಿಸಲಾಗು ವುದು.

ಸಂಪೂರ್ಣವಾಗಿಗುಣಮುಖರಾಗು ವವರೆಗೆ ಸರ್ಕಾರದ ನಿಯಮಗಳನ್ನುಚಾಚೂ ತಪ್ಪದೆ ಪಾಲಿಸಬೇಕು ಎಂದು ಡಾ| ಮಹೇಂದ್ರಪ್ಪಸೂಚನೆ ನೀಡಿದರು.ಕೊರೊನಾ ಎರಡನೆಯ ಅಲೆ ವ್ಯಾಪಕವಾಗಿ ಹರಡುತ್ತಿದ್ದು,ಸಾರ್ವಜನಿಕರು ಭಯಭೀತರಾಗದೆ ಮುಂಜಾಗ್ರತಾಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವಿಮಾಡಿದರು.

ಈ ವೇಳೆ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಡಾ.ನಾಗೇಂದ್ರ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಂ.ರೇಖಾ, ಪುರಸಭಾ ಮುಖ್ಯಾ ಧಿಕಾರಿ ಡಿ.ಪುಟ್ಟರಾಜು, ಹಿರಿಯಆರೋಗ್ಯ ನಿರೀಕ್ಷಕ ಕೆ.ವಿ.ರಮೇಶ್‌, ಆರೋಗ್ಯ ನಿರೀಕ್ಷಕರಾದಎಚ್‌.ಜೆ.ಮಹೇಶ್‌, ಅಂಬರೀಶ್‌ ಇತರರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next