Advertisement

ಕೋವಿಡ್‌ ಕರ್ಫ್ಯೂ ವ್ಯವಸ್ಥೆ ಪರಿಶೀಲಿಸಿದ ಎಸ್ಪಿ

01:35 PM May 26, 2021 | Team Udayavani |

ರಾಮನಗರ: ಜಿಲ್ಲಾ ಕೇಂದ್ರ ರಾಮನಗರದಲ್ಲಿ ಕೋವಿಡ್‌ ಕರ್ಫ್ಯೂ ವ್ಯವಸ್ಥೆ ಪರಿಶೀಲನೆಗೆ ಖುದ್ದು ಎಸ್ಪಿ ಎಸ್‌.ಗಿರೀಶ್‌ಮಂಗಳವಾರ ಫೀಲ್ಡಿಗಿಳಿದಿದ್ದರು. ನಗರಸಂಚಾರ ನಡೆಸಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ, ಪಾದಚಾರಿಗಳ ಪರಿಶೀಲನೆ ನಡೆಸಿದರು.ಸೋಮವಾರದಿಂದ ಕೋವಿಡ್‌ಕರ್ಫ್ಯೂವನ್ನು ಕಠಿಣವಾಗಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರ ಜಿಲ್ಲೆಗಳಿಗೆ ಸೂಚಿಸಿದೆ.

Advertisement

ಬೆಳಗ್ಗೆ 10 ಗಂಟೆವರೆಗೆಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕೊಡಲಾಗಿದೆ. ಬೆಳಗ್ಗೆ 10 ಗಂಟೆ ನಂತರವೂ ಜಿಲ್ಲಾ ಕೇಂದ್ರ ರಾಮನಗರ ಸೇರಿಕರ್ಫ್ಯೂ ವೇಳೆಯಲ್ಲಿ ಜನ, ವಾಹನಸಂಚಾರ ನಿಯಂತ್ರಣದಲ್ಲಿಲ್ಲ ಎಂಬಆರೋಪಕೇಳಿ ಬಂದಿದ್ದವು.ರಾಮನಗರ ನಗರದಲ್ಲಿ 4 ಚೆಕ್‌ಪೋಸ್ಟ್‌ ಸ್ಥಾಪಿಸಲಾಗಿದೆ.

ಎಸ್ಪಿ ರೈಲ್ವೆನಿಲ್ದಾಣದ ಬಳಿಯ ಚೆಕ್‌ ಪೋಸ್ಟ್‌,ಮಾಗಡಿ ರಸ್ತೆಯ ಚೆಕ್‌ ಪೋಸ್ಟ್‌ಗೆಭೇಟಿ ನೀಡಿದರು. ಕುಂಟು ನೆಪ ಹೇಳಿಸಂಚರಿಸುವ ವಾಹನ, ಪಾದಚಾರಿಗಳವಿರುದ್ಧ ಕ್ರಮ ಜರುಗಿಸಿ ಎಂದುಸಿಬ್ಬಂದಿಗೆ ಆದೇಶಿಸಿದರು. ಈ ವೇಳೆ ಸಂಘಟನೆಯೊಂದರ ಹೆಸರಿನ ಸ್ಟಿಕ್ಕರ್‌ ಹಾಕಿಕೊಂಡು ಬಂದ ಕಾರೊಂದನ್ನುಗಮನಿಸಿದ ಎಸ್ಪಿ, ಸಂಘಟನೆ ಹೆಸರಿನ ಸ್ಟಿಕ್ಕರ್‌ ಅನ್ನು ಸ್ವತಃ ‌Ì ಕಿತ್ತು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next