Advertisement

ಅಲಿಗಢ: ಎರಡು ತಿಂಗಳಿಂದ ಹಸಿವಿನಿಂದ ಇದ್ದ ತಾಯಿ ಮತ್ತು ಐವರು ಮಕ್ಕಳ ರಕ್ಷಣೆ

09:38 PM Jun 17, 2021 | Team Udayavani |

ಅಲಿಗಢ: ಉತ್ತರ ಪ್ರದೇಶದ ಅಲಿಗಢದಲ್ಲಿ ಎರಡು ತಿಂಗಳಿಂದ ಹಸಿವಿನಿಂದ ಇದ್ದ ತಾಯಿ ಮತ್ತು ಐವರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ನಗರದ ಎನ್‌ಜಿಒ ಒಂದು ಅವರ ಪರಿಸ್ಥಿತಿಯ ಬಗ್ಗೆ ಅರಿತುಕೊಂಡು ನೆರವಿಗೆ ಬಂದಿದೆ. ಈ ಕುಟುಂಬದ ಬಳಿ ಆಧಾರ್‌ ಕಾರ್ಡ್‌, ಪಡಿತರ ಚೀಟಿಯೂ ಇಲ್ಲ. ಕೊರೊನಾದ 2ನೇ ಅಲೆಯಿಂದಾಗಿ ಕುಟುಂಬದ ಹಿರಿಯ ಮಗ ಕೆಲಸ ಕಳೆದುಕೊಂಡಿದ್ದರು. ಮಹಿಳೆಯ ಪತಿ ಎರಡು ವರ್ಷಗಳ ಹಿಂದೆಯೇ ಅಸುನೀಗಿದ್ದರು.

ಸೋಂಕು ದೇಶದಲ್ಲಿ ಧಾಂಗುಡಿ ಇರುವುದಕ್ಕಿಂತ ಮೊದಲೇ ಪಡಿತರ ಚೀಟಿ, ಆಧಾರ್‌ ಕಾರ್ಡ್‌ಗೆ ಏಜೆಂಟ್‌ ಒಬ್ಬನ ಮೂಲಕ ಅರ್ಜಿ ಸಲ್ಲಿಕೆ ಮಾಡಿದ್ದಾಗಿ ಹೇಳಿಕೊಂಡಿರುವ ಮಹಿಳೆ, ನಂತರ ಆತ ಅರ್ಜಿಯ ಬಗ್ಗೆ ಗಮನ ಕೊಡಲಿಲ್ಲ. ಅದಕ್ಕಾಗಿ 350 ರೂ.ಗಳನ್ನು ನೀಡಿದ್ದಾಗಿಯೂ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next